LATEST NEWS
ನಾಳೆ ಬಂದ್ ಆಗಲಿದೆಯೇ ಕರಾವಳಿ ?
ನಾಳೆ ಬಂದ್ ಆಗಲಿದೆಯೇ ಕರಾವಳಿ ?
ಮಂಗಳೂರು ಸಪ್ಟೆಂಬರ್ 9: ತೈಲ ಬೆಲೆ ಏರಿಕೆ ಹಿನ್ನಲೆಯಲ್ಲಿ ಕಾಂಗ್ರೇಸ್ ನೀಡಿರುವ ಭಾರತ್ ಬಂದ್ ಗೆ ಕರಾವಳಿಯಲ್ಲಿ ಬೆಂಬಲ ವ್ಯಕ್ತವಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಾಳೆ ಖಾಸಗಿ ಬಸ್ ಸೇವೆ , ಆಟೋರಿಕ್ಷಾ ಸೇರಿದಂತೆ ಕೆಎಸ್ ಆರ್ ಟಿ ಸಿ ಬಸ್ ಸೇವೆ ಬಂದ್ ಆಗಲಿದ್ದು, ಈ ಹಿನ್ನಲೆಯಲ್ಲಿ ನಾಳೆ ಸಂಪೂರ್ಣ ಕರಾವಳಿ ಬಂದ್ ಆಗಲಿದೆ ಎನ್ನಲಾಗಿದೆ.
ಈಗಾಗಲೇ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ಮುಂಜಾಗೃತಾ ಕ್ರಮವಾಗಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಅಲ್ಲದೆ ಕರಾವಳಿಯ ಜೀವನಾಡಿಯಾಗಿರುವ ಖಾಸಗಿ ಬಸ್ ಸಂಚಾರ ಕೂಡ ನಾಳೆ ಬಂದ್ ಆಗಲಿದ್ದು, ಕರಾವಳಿಯ ಬಸ್ ಮಾಲಕರ ಸಂಘ ಈಗಾಗಲೇ ಬಂದ್ ನೈತಿಕ ಬೆಂಬಲ ನೀಡಿದ್ದು ನಾಳೆ ಬಸ್ ಸಂಚಾರ ನಡೆಸುವುದು ಕಷ್ಟ ಎಂದು ಹೇಳಲಾಗಿದೆ.
You must be logged in to post a comment Login