Connect with us

    DAKSHINA KANNADA

    ಆಶ್ಲೇಷ  ನಕ್ಷತ್ರದ ದಿನವಾದ ಇಂದು ಸುಬ್ರಹ್ಮಣ್ಯದಲ್ಲಿ  ಆಶ್ಲೇಷ ಸೇವೆಗೆ ಮುಗಿಬಿದ್ದ ಭಕ್ತರು.

    ಆಶ್ಲೇಷ  ನಕ್ಷತ್ರದ ದಿನವಾದ ಇಂದು ಸುಬ್ರಹ್ಮಣ್ಯದಲ್ಲಿ  ಆಶ್ಲೇಷ ಸೇವೆಗೆ ಮುಗಿಬಿದ್ದ ಭಕ್ತರು.

    ಆಶ್ಲೇಷ ನಕ್ಷತ್ರ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಭಕ್ತರ ಜಂಗುಳಿ ಕಂಡು ಬಂದಿದೆ.

    ಆಶ್ಲೇಷ ನಕ್ಷತ್ರದ ದಿನ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದರೆ, ಇಷ್ಟಾರ್ಥಗಳು ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆಯ ಹಿನ್ನಲೆಯಲ್ಲಿ ಭಕ್ತಾಧಿಗಳು ಇಂದು ಕ್ಷೇತ್ರದಲ್ಲಿ ಆಶ್ಲೇಷ ಸೇವೆಗಾಗಿ ಮುಗಿಬಿದ್ದಿದ್ದಾರೆ.

    ಕೊರೊನಾ ಲಾಕ್ ಡೌನ ಮಾರ್ಗಸೂಚಿ ಹಿನ್ನಲೆಯಲ್ಲಿ ಕ್ಷೇತ್ರದ ಪ್ರಮುಖ ಸೇವೆಗಳಾದ ಆಶ್ಲೇಷ ಹಾಗೂ ಸರ್ಪ ಸಂಸ್ಕಾರ ಸೇವೆಗಳನ್ನು ನಿಗದಿತ ಸಂಖ್ಯೆಯಲ್ಲಿ ಮಾತ್ರ ನೆರವೇರಿಸಲಾಗುತ್ತಿದೆ.

    ದಿನಕ್ಕೆ ಕೇವಲ 150 ಆಶ್ಲೇಷ ಬಲಿ ಸೇವೆಯನ್ನು ಕ್ಷೇತ್ರದಲ್ಲಿ ಇದೀಗ ನೆರವೇರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೇವೆಯ ಚೀಟಿ ಪಡೆಯಲು ಭಕ್ತರು ನಿನ್ನೆ ರಾತ್ರಿಯಿಂದಲೇ ಸೇವಾ ಕೌಂಟರ್ ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.

    ಮೊದಲ 150 ಜನರಿಗೆ ಮಾತ್ರ ಸೇವೆ ನೆರವೇರಿಸುವ ಅವಕಾಶವಿದ್ದ ಕಾರಣ ಭಕ್ತರು ಕೌಂಟರ್ ತೆರಯುವ ಮೊದಲೇ ಸರತಿ ಸಾಲಿನಲ್ಲಿ ನಿಂತು ತನ್ನ ಸರತಿಗಾಗಿ ಕಾದಿದ್ದಾರೆ.

    ಇಂದು ಮುಂಜಾನೆ ಮತ್ತೆ ಭಕ್ತರು ದೂರದೂರುಗಳಿಂದ ಆಶ್ಲೇಷ ಸೇವೆ ನೆರವೇರಿಸಲು ಕ್ಷೇತ್ರಕ್ಕೆ ಬಂದಿದ್ದರೂ, ನಿಗದಿತ ಸೇವೆಗಳು ಅದಾಗಲೇ ಬುಕ್ ಆದ ಪರಿಣಾಮ ದೇವರ ದರ್ಶನ ಮಾಡಿ ಭಕ್ತರು ತೆರಳಿದ್ದರು.

    ಆಶ್ಲೇಷ ನಕ್ಷತ್ರ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಇಂದು ಭಾರೀ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದು ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದಿದ್ದಾರೆ.

    ಕೊರೊನಾ ಅನ್ ಲಾಕ್ ಜಾರಿಗೆ ಬಂದ ಬಳಿಕ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳ ಕಂಡು ಬರಲಾರಂಭಿಸಿದೆ.

    ಅಲ್ಲದೆ ನವರಾತ್ರಿ ಉತ್ಸವವೂ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

    Share Information
    Advertisement
    Click to comment

    You must be logged in to post a comment Login

    Leave a Reply