LATEST NEWS
ಸುಳ್ಯ ಶೂಟೌಟ್ ಆರೋಪಿಗಳ ಬಂಧನ
ಸುಳ್ಯ, ಅಕ್ಟೋಬರ್ 11: ಸುಳ್ಯದ ಶಾಂತಿನಗರ ಎಂಬಲ್ಲಿ ಗುಂಡು ಹಾರಿಸಿ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೂರು ಬಂದೂಕು, ಒಂದು ಕತ್ತಿ ಮತ್ತು ಒಂದು ಚೂರಿ ವಶಕ್ಕೆ ಪಡೆಯಲಾಗಿದೆ.
ಕೃತ್ಯಕ್ಕೆ ಬಳಸಿದ ಕ್ವಾಲೀಸ್ ಕಾರು ಮತ್ತು ಸ್ವಿಫ್ಟ್ ಕಾರು ವಶಕ್ಕೆಪಡೆಯಲಾಗಿದ್ದು, ಅಕ್ಟೋಬರ್ 8 ರ ಮುಂಜಾನೆ ಸಂಪತ್ (40) ಕೊಲೆಗೀಡಾಗಿದ್ದ ವ್ಯಕ್ತಿಯಾಗಿದ್ದಾರೆ.
ಸಂಪತ್ 2019 ರಲ್ಲಿ ಸಂಪಾಜೆಯಲ್ಲಿ ನಡೆದ ಕಳಗಿ ಬಾಲಚಂದ್ರ ಹತ್ಯೆಯ ಆರೋಪಿಯಾಗಿದ್ದು, ಆರೋಪಿಗಳಲ್ಲಿ ನಾಲ್ವರು ಕಲ್ಲುಗುಂಡಿ ಹಾಗೂ ಓರ್ವ ಜಾಲ್ಸೂರು ನಿವಾಸಿ ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನಲೆಯಲ್ಲಿ ಆರೋಪಿಗಳ ಹೆಸರು ಬಹಿರಂಗಪಡಿಸಿಲ್ಲ.
You must be logged in to post a comment Login