Connect with us

    DAKSHINA KANNADA

    ಉಡುಪಿಯಲ್ಲಿ ಮದುವೆ ಕಾರ್ಯ ಮುಗಿಸಿ ಮಂಗಳೂರಿಗೆ ಬಂದು ಕುಟುಂಬ ಸದಸ್ಯರೊಂದಿಗೆ ಮತದಾನ ಮಾಡಿದ ಮದುಮಗ..!

    ಮಂಗಳೂರು : ಮದುವೆ ಸಂಭ್ರಮ ಮುಗಿಸಿ ಮಂಗಳೂರಿಗೆ ಆಗಮಿಸಿ ಮತದಾನ ಮಾಡುವ ಮೂಲಕ ಮದುಮಗನೊಬ್ಬ ಸಮಾಜಕ್ಕೆ ಮಾದರಿಯಾಗಿದ್ದಾರೆ

    ಮಂಗಳೂರು ಹಂಪನಕಟ್ಟೆಯ ಗಣಪತಿ ಹೈಸ್ಕೂಲಿನ ಬೂತ್ ನಂಬ್ರ 126 ರಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿದ್ದಾರೆ, ನಗರದ ರಥ ಬೀದಿಯ ರಘುವೀರ್ ಕಾಮತ್ ಮತ್ತು ಚೇತನಾ ಕಾಮತ್ ಅವರ ಸುಪುತ್ರ ಮೋಹನ್ ಅವರ ವಿವಾಹ ಉಡುಪಿಯ ಶ್ರುತಿಕಾ ಅವರೊಂದಿಗೆ ಹೋಟೆಲ್ ಕಿದಿಯೂರಿನಲ್ಲಿ ಆಯೋಜಿಸಲಾಗಿತ್ತು. ಮದುವೆ ಸಮಾರಂಭ ಮುಗಿಸಿದ ಮದುಮಗ ಮೋಹನ್ ತಂದೆ ರಘುವೀರ್ , ತಾಯಿ ಚೇತನಾ ಕಾಮತ್, ಹಿರಿಯ ಮಗ ಜಯರಾಂ ಕಾಮತ್ ಅವರೊಂದಿಗೆ ಸಂಜೆ ನೇರವಾಗಿ ಮಂಗಳೂರು ನಗರದ ಗಣಪತಿ ಶಾಲೆಯ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿ ಮಾದರಿಯಾದರು.

    .

    Share Information
    Advertisement
    Click to comment

    You must be logged in to post a comment Login

    Leave a Reply