Connect with us

    KARNATAKA

    ಬಾಗಿಲ ಬಳಿ ನಿಲ್ಲಬೇಡ ಎಂದಿದ್ದಕ್ಕೆ BMTC ನಿರ್ವಾಹಕನಿಗೆ ಚಾಕು ಇರಿತ; ಆಘಾತಕಾರಿ ವಿಡಿಯೋ ವೈರಲ್​

    ಬೆಂಗಳೂರು: ಬಾಗಿಲ ಬಳಿ ನಿಲ್ಲಬೇಡ ಎಂದು ಹೇಳಿದ್ದಕ್ಕೆ ಯುವಕನೋರ್ವ BMTC ವೋಲ್ವೋ ಬಸ್​ ಕಂಡಕ್ಟರ್​ಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ನಡೆದಿದೆ. ಅಕ್ಟೋಬರ್​ 01ರಂದು ಈ ಘಟನೆ ನಡೆದಿದ್ದು, ವೈಟ್​ಫೀಲ್ಡ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಅಕ್ಟೋಬರ್​ 01ರ ಸಂಜೆ 7 ಗಂಟೆ ಸುಮಾರಿಗೆ ಜಾರ್ಖಂಡ್​ ಮೂಲದ ಹರ್ಷ್​ ಸಿನ್ಹಾ ಎಂಬಾತ ವೈದೇಹಿ ನಿಲ್ದಾಣದಲ್ಲಿ ವೋಲ್ವೋ ಬಸ್​ ಹತ್ತಿದ್ದಾನೆ. ಯುವಕ ಬಸ್​ ಹತ್ತಿದ್ದ ಬಳಿಕ ಬಾಗಿಲ ಬಳಿ ನಿಲ್ಲದಂತೆ ನಿರ್ವಾಹಕ ಯೋಗೇಶ್​ ಸೂಚಿಸಿದ್ದು, ಕುಪಿತಗೊಂಡ ಆರೋಪಿ ಕಂಡಕ್ಟರ್​ ಹೊಟ್ಟೆಗೆ ಎರಡರಿಂದ ಮೂರು ಬಾರಿ ಇರಿದಿದ್ದಾನೆ.

    ನಿರ್ವಾಕನಿಗೆ ಚಾಕುವಿನಿಂದ ಇರಿದಿದ್ದನ್ನು ಕಂಡು ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದು, ಆರೋಪಿ ಹಿಡಿಯುವಷ್ಟರಲ್ಲೇ ಇಳಿದು ಎಸ್ಕೇಪ್​ ಆಗಿದ್ದಾನೆ. ಕೂಡಲೇ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿದ ಪ್ರಯಾಣಿಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಯನ್ನು ಸೆರೆಹಿಡಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವೈಟ್​ಫೀಲ್ಡ್​ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ನಿರುದ್ಯೋಗಿ ಎಂಬುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply