Connect with us

    LATEST NEWS

    ಕುಡಿದ ಅಮಲಿನಲ್ಲಿ ಮರ್ಮಾಂಗವನ್ನೇ ಕಚ್ಚಿ ತುಂಡರಿಸಿದ ಭೂಪ!

    ತಿರುವನಂತಪುರ, ಫೆಬ್ರವರಿ 09: ಕುಡಿದ ಅಮಲಿನಲ್ಲಿ ಮಾರಣಾಂತಿಕ ಹಲ್ಲೆ ಮಾಡುವುದು, ಕೊಲೆ ಮಾಡುವುದು ಮಾಮೂಲು. ಆದರೆ ಇಲ್ಲೊಬ್ಬ ವ್ಯಕ್ತಿ ಇನ್ನೊಬ್ಬನ ಮರ್ಮಾಂಗವನ್ನೇ ಬಾಯಿಯಿಂದ ಕಚ್ಚಿ ಕಟ್​ ಮಾಡಿದ್ದಾನೆ.

    ಈ ಭಯಾನಕ ಘಟನೆ ನಡೆದಿರುವುದು ಕೇರಳದ ಕುನ್ನಾಥುರನ ಬಾರ್​ನಲ್ಲಿ. ಕುಡಿದ ಅಮಲಿನಲ್ಲಿ ಗಲಾಟೆ ವೇಳೆ ಮರ್ಮಾಂಗವನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿದ್ದಾನೆ. ಇಂಥದ್ದೊಂದು ಕೃತ್ಯ ಎಸಗಿದವರು 28 ವರ್ಷದ ಷರೀಫ್​ ಎಂಬಾತ. ಈತನ ಈ ಕೃತ್ಯಕ್ಕೆ ಬಲಿಯಾದವ 55 ವರ್ಷದ ಸುಲೇಮಾನ್.

    ಷರೀಫ್ ಪೆರುಂಬಾದಪ್ಪು ನಿವಾಸಿಯಾಗಿದ್ದು, ಸುಲೇಮಾನ್ ಪುನ್ನುಕಾವುನಲ್ಲಿ ವಾಸವಾಗಿದ್ದರು. ಇಬ್ಬರೂ ಬಾರ್​ಗೆ ಬೇರೆ ಬೇರೆ ವಾಹನಗಳಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಷರೀಫ್ ಆಟೋ ರಸ್ತೆಯಲ್ಲಿ ಸುಲೇಮಾನ್​ನ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಸಂಬಂಧ ಗಲಾಟೆ ನಡೆದಿತ್ತು. ಆ ಸಮಯದಲ್ಲಿ ನೆತ್ತಿಗೇರಿದ್ದ ಸಿಟ್ಟು ಬಾರ್​ಗೆ ಹೋಗಿ ಇಬ್ಬರೂ ಕಂಠಪೂರ್ತಿ ಕುಡಿದ ಮೇಲೆ ಈ ರೀತಿ ಕೃತ್ಯದಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಇಬ್ಬರ ಜಗಳ ಬಿಡಿಸಲು ಹೋದ ಬಾರ್ ಸಿಬ್ಬಂದಿಯ ಮೇಲೆಯೂ ಷರೀಫ್ ಹಲ್ಲೆ ನಡೆಸಿದ್ದಾನೆ. ಕೊನೆಗೆ ಬಾರ್ ಸಿಬ್ಬಂದಿ ಗ್ರಾಹಕರ ನೆರವಿಬನಿಂದ ಷರೀಫ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ, ಸುಲೇಮಾನ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸುಲೇಮಾನ್​ನನ್ನು ತ್ರಿಶೂರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ತುಂಡಾದ ಮರ್ಮಾಂಗವನ್ನ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply