LATEST NEWS
ಕುಡಿದ ಅಮಲಿನಲ್ಲಿ ಮರ್ಮಾಂಗವನ್ನೇ ಕಚ್ಚಿ ತುಂಡರಿಸಿದ ಭೂಪ!
ತಿರುವನಂತಪುರ, ಫೆಬ್ರವರಿ 09: ಕುಡಿದ ಅಮಲಿನಲ್ಲಿ ಮಾರಣಾಂತಿಕ ಹಲ್ಲೆ ಮಾಡುವುದು, ಕೊಲೆ ಮಾಡುವುದು ಮಾಮೂಲು. ಆದರೆ ಇಲ್ಲೊಬ್ಬ ವ್ಯಕ್ತಿ ಇನ್ನೊಬ್ಬನ ಮರ್ಮಾಂಗವನ್ನೇ ಬಾಯಿಯಿಂದ ಕಚ್ಚಿ ಕಟ್ ಮಾಡಿದ್ದಾನೆ.
ಈ ಭಯಾನಕ ಘಟನೆ ನಡೆದಿರುವುದು ಕೇರಳದ ಕುನ್ನಾಥುರನ ಬಾರ್ನಲ್ಲಿ. ಕುಡಿದ ಅಮಲಿನಲ್ಲಿ ಗಲಾಟೆ ವೇಳೆ ಮರ್ಮಾಂಗವನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿದ್ದಾನೆ. ಇಂಥದ್ದೊಂದು ಕೃತ್ಯ ಎಸಗಿದವರು 28 ವರ್ಷದ ಷರೀಫ್ ಎಂಬಾತ. ಈತನ ಈ ಕೃತ್ಯಕ್ಕೆ ಬಲಿಯಾದವ 55 ವರ್ಷದ ಸುಲೇಮಾನ್.
ಷರೀಫ್ ಪೆರುಂಬಾದಪ್ಪು ನಿವಾಸಿಯಾಗಿದ್ದು, ಸುಲೇಮಾನ್ ಪುನ್ನುಕಾವುನಲ್ಲಿ ವಾಸವಾಗಿದ್ದರು. ಇಬ್ಬರೂ ಬಾರ್ಗೆ ಬೇರೆ ಬೇರೆ ವಾಹನಗಳಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಷರೀಫ್ ಆಟೋ ರಸ್ತೆಯಲ್ಲಿ ಸುಲೇಮಾನ್ನ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಸಂಬಂಧ ಗಲಾಟೆ ನಡೆದಿತ್ತು. ಆ ಸಮಯದಲ್ಲಿ ನೆತ್ತಿಗೇರಿದ್ದ ಸಿಟ್ಟು ಬಾರ್ಗೆ ಹೋಗಿ ಇಬ್ಬರೂ ಕಂಠಪೂರ್ತಿ ಕುಡಿದ ಮೇಲೆ ಈ ರೀತಿ ಕೃತ್ಯದಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಬ್ಬರ ಜಗಳ ಬಿಡಿಸಲು ಹೋದ ಬಾರ್ ಸಿಬ್ಬಂದಿಯ ಮೇಲೆಯೂ ಷರೀಫ್ ಹಲ್ಲೆ ನಡೆಸಿದ್ದಾನೆ. ಕೊನೆಗೆ ಬಾರ್ ಸಿಬ್ಬಂದಿ ಗ್ರಾಹಕರ ನೆರವಿಬನಿಂದ ಷರೀಫ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ, ಸುಲೇಮಾನ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸುಲೇಮಾನ್ನನ್ನು ತ್ರಿಶೂರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ತುಂಡಾದ ಮರ್ಮಾಂಗವನ್ನ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
You must be logged in to post a comment Login