DAKSHINA KANNADA
ಶಬರಿಮಲೆಗೆ ಉಗ್ರರ ಭೀತಿ
ಶಬರಿಮಲೆಗೆ ಉಗ್ರರ ಭೀತಿ
ಮಂಗಳೂರು,ನವಂಬರ್ 12: ದೇಶದ ಹೆಸರಾಂತ ಪುಣ್ಯಕ್ಷೇತ್ರ ಕೇರಳದ ಶಬರಿಮಲೆಗೆ ಉಗ್ರರ ಹಾಗೂ ನಕ್ಸಲ್ ದಾಳಿಯ ಭೀತಿ ಎದುರಾಗಿದೆ.
ಶಬರಿಮಲೆ ಭಕ್ತರ ಯಾತ್ರೆ ಆರಂಭವಾಗಲು ಕೆಲವೇ ದಿನ ಬಾಕಿ ಉಳಿದಿದ್ದು, ಇಲ್ಲಿಗೆ ಉಗ್ರರು ನುಸುಳುವ ಬಗ್ಗೆ ಪೋಲೀಸ್ ಗುಪ್ತಚರ ವಿಭಾಗ ಕೇರಳ ಸರಕಾರಕ್ಕೆ ಮಾಹಿತಿ ನೀಡಿದೆ.
ಶಬರಿಮಲೆ ದಟ್ಟ ಅರಣ್ಯದ ಮಧ್ಯೆ ಇರುವಂತಹ ಪುಣ್ಯಕ್ಷೇತ್ರವಾಗಿದ್ದು, ದಟ್ಟಾರಣ್ಯದ ಲಾಭ ಪಡೆದು ಉಗ್ರರು ಹಾಗೂ ನಕ್ಸಲ್ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಮುದ್ರ ಮಾರ್ಗವಾಗಿ ಸ್ಪೋಟಕಗಳು ಕೇರಳಕ್ಕೆ ಸಾಗಾಟವಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ರಾಜ್ಯ ಪೋಲೀಸರು ಎಚ್ಚರಿಕೆಯಿಂದಿರುವಂತೆಯೂ ಸೂಚಿಸಲಾಗಿದೆ.
ಸ್ವಾಮಿ ಅಯ್ಯಪ್ಪ ಕ್ಷೇತ್ರದ ಹಾದಿಯಲ್ಲಿ ಸಂಚರಿಸುವ ಟ್ಯಾಕ್ಟರ್, ನಡೆಯಲಾರದವರನ್ನು ಹೊತ್ತು ಸಾಗಿಸುವ ಡೋಲಿ ವ್ಯವಸ್ಥೆಯನ್ನೂ ಸೂಕ್ತ ತಪಾಸಣೆ ನಡೆಸಿಯೇ ಬಿಡುವಂತೆಯೂ ಸೂಚಿಸಲಾಗಿದೆ.
You must be logged in to post a comment Login