DAKSHINA KANNADA
ಎಸ್ ಡಿಪಿಐ ಜೊತೆ ಯಾವುದೇ ಹೊಂದಾಣಿಕೆ ಇಲ್ಲ – ರಮಾನಾಥ ರೈ
ಪುತ್ತೂರು ಎಪ್ರಿಲ್ 23: ಕಾಂಗ್ರೇಸ್ ಜೊತೆ ಎಸ್.ಡಿ.ಪಿ.ಐ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆರೋಪವನ್ನು ಕಾಂಗ್ರೇಸ್ ಹಿರಿಯ ಮುಖಂಡ ರಮಾನಾಥ ರೈ ತಳ್ಳಿಹಾಕಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಎಸ್ ಡಿಪಿಐ ಈ ಬಾರಿ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರಬಹುದು, ಅಂದ ಮಾತ್ರಕ್ಕೆ ಕಾಂಗ್ರೇಸ್ ಜೊತೆ ಹೊಂದಾಣಿಕೆಯಾಗಿದೆ ಎಂದಲ್ಲ, ಹೊಂದಾಣಿಕೆ ಆಗಬೇಕಾದರೆ ಅವರೊಂದಿಗೆ ಸೀಟ್ ಶೇರಿಂಗ್ ಆಗಬೇಕು, ಸೀಟುಗಳ ಕೊಡು ಕೊಳ್ಳುವಿಕೆ ನಡೆಯಬೇಕು ಆದರೆ ಇಂಥ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ, ಇದೆಲ್ಲಾ ಬಿಜೆಪಿಯವರ ಅಪಪ್ರಚಾರವಾಗಿದ್ದು, ನಮಗೆ ಎಲ್ಲರ ಮತವೂ ಬೇಕು ಎಂದರು.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲೆ 40% ಭ್ರಷ್ಟಾಚಾರ ಆರೋಪ ಹಾಕಿದ್ದಿರಲ್ಲ ಎಂಬ ಪ್ರಶ್ನೆಗೆ ತಡವರಿಸಿದ ಮಾಜಿ ಸಚಿವ ರೈ ಬಿಜೆಪಿಯವರ ಮೇಲೆ ತನಿಖೆ ನಡೆಯುತ್ತದೆ, ಪ್ರಕರಣಗಳ ಬಗ್ಗೆ ನಿರ್ದಿಷ್ಟವಾದ ವಿಷಯವನ್ನು ತೆಗೆದುಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದರು.
You must be logged in to post a comment Login