Connect with us

    DAKSHINA KANNADA

    ಮೇಯಲು ಬಿಟ್ಟಿದ್ದ ಮೂಕಪ್ರಾಣಿಗೆ ಗುಂಡಿಕ್ಕಿ ಹತ್ಯೆ…!!

    ಪುತ್ತೂರು ಸೆಪ್ಟೆಂಬರ್ 08: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಮೂಕಪ್ರಾಣಿಯ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅರಸಿನಮಕ್ಕಿಯ ಹತ್ಯಡ್ಕ ಎಂಬಲ್ಲಿ ನಡೆದಿದೆ.


    ಮಹಾದೇವ ಭಟ್ ಎಂಬವರಿಗೆ ಸೇರಿದ ಎಮ್ಮೆ ಇದಾಗಿದ್ದುು, ಮೇಯಲು ಬಿಟ್ಟ ಸಾಕು ಎಮ್ಮೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೇಯಲು ಬಿಟ್ಟಿದ್ದ ಎಮ್ಮೆ ಮನೆಗೆ ಬಾರದ ಹಿನ್ನಲೆಯಲ್ಲಿ ಸ್ಥಳೀಯ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದ ಮನೆ ಮಂದಿ, ಕೊನೆಗೆ ನೀರಿನ ಕಣಿಯೊಂದರ ಎಮ್ಮೆಯ ಮೃತದೇಹ ಪತ್ತೆಯಾಗಿದೆ.

    ಎಮ್ಮೆಯ ದೇಹದಲ್ಲಿ ಎರಡು ಗುಂಡುಗಳು ಪತ್ತೆಯಾಗಿದ್ದು, ಕಾಡು ಪ್ರಾಣಿ ಬೇಟೆಗಾರರ‌ ಕೃತ್ಯ ಶಂಕೆ ವ್ಯಕ್ತವಾಗಿದೆ. ಈ ಕುರಿತಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಾರದ ಹಿಂದೆ ಇಂಥಹುದೇ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply