Connect with us

MANGALORE

ಬಿಜೆಪಿ ಮಲೆಯಾಳಿ ಘಟಕದಿಂದ ಓಣಂ ಆಚರಣೆ

ಬಿಜೆಪಿ ಮಲೆಯಾಳಿ ಘಟಕದಿಂದ ಓಣಂ ಆಚರಣೆ

ಮಂಗಳೂರು ಸೆಪ್ಟೆಂಬರ್ 17: ಬಿಜೆಪಿ ಮಲೆಯಾಳಿ ಸೆಲ್ ಕರ್ನಾಟಕ ವತಿಯಿಂದ ಮಲೆಯಾಳಿ ಸಮಾವೇಶ ಮತ್ತು ಓಣಂ ಕಾರ್ಯಕ್ರಮ ಮಂಗಳೂರಿನ ಸಿ.ವಿ. ನಾಯಕ್ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

ನಂತರ ಮಾತನಾಡಿದ ನಳಿನ್ ಕುಮಾರ್ ಕೇರಳ ದೇವರ ಸ್ವಂತ ನಾಡು, ಅಂತಹ ನಾಡಿನಲ್ಲಿ ಸಂತರು ನಡೆದಾಡಿದ್ದಾರೆ. ಆದರೆ ಅಲ್ಲೀಗ ರಾಜಕೀಯ ಪರಿವರ್ತನೆ ಅಗತ್ಯವಿದೆ ಎಂದು ಅವರು ಹೇಳಿದರು. ಭಾಷೆಯ, ನೀರಿನ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಜೊತೆ ಆಗಾಗ ಸಂಘರ್ಷ, ತಗಾದೆ ಗಳು ನಡೆಯುತ್ತಿರುತ್ತವೆ. ಆದರೆ ಕೇರಳೀಗರ ಜೊತೆ ಕರ್ನಾಟಕದ ಅಂತಹ ಸಂಘರ್ಷ ನಡೆದಿಲ್ಲ. ಇದು ಭಾಷಾ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಿರುವ ಬಿಜೆಪಿಗೆ ಎಲ್ಲ ಭಾಷಿಗರು ಒಂದೇ. ಅದಕ್ಕಾಗಿ ಕರಾವಳಿಯಲ್ಲಿ ಮಲೆಯಾಳಿ ಭಾಷಿಗ ಕೇರಳಿಗರು ಓಣಂನ್ನು ಆಚರಿಸುತ್ತಿದ್ದಾರೆ. ಇದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಭಾವೈಕ್ಯತೆಯ ದ್ಯೋತಕ ಎಂದು ಅವರು ಹೇಳಿದರು.

ಕಾರ್ಯಕ್ರಮದ ಪ್ರಯುಕ್ತ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.

 

Share Information
Advertisement
Click to comment

You must be logged in to post a comment Login

Leave a Reply