Connect with us

    DAKSHINA KANNADA

    ಕಾವ್ಯಾ ನ್ಯಾಯಕ್ಕೆ ಹೋರಾಟ ಅಗತ್ಯ: ಮಧು ಬಂಗಾರಪ್ಪ

    ಮಂಗಳೂರು, ಆಗಸ್ಟ್ 28 : ಇತ್ತಿಚೆಗೆ ಕಾಲೇಜ್ ಕ್ಯಾಂಪಸ್ ಹಾಸ್ಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಆಳ್ವಾಸ್ ಕಾಲೇಜಿನ  ಪ್ರತಿಭಾನ್ವಿತ ವಿದ್ಯಾರ್ಥಿನಿ  ಕಾವ್ಯಾ ಳ ಮನೆಗೆ  ಜೆ ಡಿ ಎಸ್  ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಕಾವ್ಯಾ ಪೋಷಕರಿಗೆ ಸಾಂತ್ವಾನ ಹೇಳಿದರು. ಇಂದು ಜೆ ಡಿ ಎಸ್ ಪಕ್ಷದ, ಹಾಗೂ ಬಿಲ್ಲವ ಪ್ರಮುಖರೊಂದಿಗೆ ಕಟೀಲಿನಲ್ಲಿರುವ ಕಾವ್ಯಾ ಮನೆಗೆ ಭೇಟಿ ನೀಡಿದ ಮಧು ಬಂಗಾರಪ್ಪಅವರು ಕಾವ್ಯಾಳ ತಂದೆ-ತಾಯಿಯೊಂದಿಗೆ ಮಾತುಕತೆ ನಡೆಸಿದರು. ನ್ಯಾಯಕ್ಕಾಗಿ ತಂದೆ ಬಂಗಾರಪ್ಪರಂತೆ ಕೊನೆಯವರೆಗೆ ಇರುತ್ತೇನೆ ಎಂದ ಜೆಡಿಎಸ್ ಯುವ ನಾಯಕ  ಕಾವ್ಯಾ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ಪಕ್ಷ ಭೇದ ಮರೆತು ಒಟ್ಟಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply