Connect with us

    DAKSHINA KANNADA

    ಕಡಬದಲ್ಲಿ ಭಾರಿ ಗಾಳಿ ಮಳೆ,ಮನೆ ಮೇಲೆ ಬಿದ್ದ ಮರದಿಂದ ಪಾರಾದ ದಂಪತಿ..!

    ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಭಾರಿ ಗಾಳಿ ಮಳೆ ಸುರಿದಿದ್ದು ಗಾಳಿಗೆ ಮರವೊಂದು ಮನೆಯ ಮೇಲೆ ಬಿದ್ದು ಹಾನಿಯಾಗಿದ್ದರೆ ಮನೆಯಲ್ಲಿದ್ದದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಲ್ಲಿ ಈ ದುರ್ಘಟನೆಸಂಭವಿಸಿದ್ದು ಬಾಬು ಮತ್ತು ಲಕ್ಷ್ಮೀ ಅವರ ಮನೆ ಮರ ಬಿದ್ದ ಪರಿಣಾಮ  ಹಾನಿಯಾಗಿದೆ. ಮನೆಯ ಶೌಚಾಲಯ , ನೀರಿನ ಟ್ಯಾಂಕಿ ಕೂಡ ಸಂಪೂರ್ಣ ನಾಶವಾಗಿದೆ. ಸ್ಥಳಕ್ಕೆಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಅರಣ್ಯ ಇಲಾಖಾ ಸಿಬಂದಿ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಕ್ಕದ ಒಂದೆರಡು ಮನೆಗಳಿಗೂ ಹಾನಿ ಸಂಭವಿಸಿದೆ. ಕಡಬ ತಾಲೂಕಿನಾದ್ಯಂತ ವಿದ್ಯುತ್ಸರಬರಾಜು ಸ್ಥಗಿತಗೊಂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply