Connect with us

    DAKSHINA KANNADA

    ಬಿಜೆಪಿ ಮುಖವಾಣಿ ವೆಬ್ ಸೈಟ್ ನಿಂದ ಕಾಂಗ್ರೇಸ್ ಮುಖಂಡೆಯ ಮಾನಹಾನಿ…

    ಪುತ್ತೂರು, ಅಕ್ಟೋಬರ್ 22: ಬಿಜೆಪಿ ಪಕ್ಷದ ಮುಖವಾಣಿಯಂತೆ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರಿನ ಕಹಳೆ ನ್ಯೂಸ್ ಎನ್ನುವ ವೆಬ್ ಸೈಟ್ ನ ಮಾಲಕ ಶ್ಯಾಮ ಸುದರ್ಶನ್ ಹೊಸಮೂಲೆ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೇಸ್ ಒತ್ತಾಯಿಸಿದೆ.

    ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ಓರ್ವ ಪತ್ರಕರ್ತನ ಸೋಗಿನಲ್ಲಿ, ಬಿಜೆಪಿ ಪಕ್ಷದ ಪರವಾಗಿ ಕೆಲಸ ನಿರ್ವಹಿಸುವ ವ್ಯಕ್ತಿಯಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

    ಇತ್ತೀಚಿನ ದಿನಗಳಲ್ಲಿ ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿಗಳ ಆಸ್ತಿ-ಪಾಸ್ತಿಗಳನ್ನು ಸಂಪಾದಿಸಿದ್ದು, ಈತನ ಈ ವ್ಯವಹಾರಗಳ ಕುರಿತೂ ತನಿಖೆಯಾಗಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply