Connect with us

    LATEST NEWS

    ಭ್ರಷ್ಟಚಾರಿ ಮುಖ್ಯಮಂತ್ರಿ, ಅತ್ಯಾಚಾರಿ ವೇಣುಗೋಪಾಲ್ ರಿಂದ ರಾಜ್ಯ ಲೂಟಿ – ಯಡಿಯೂರಪ್ಪ

    ಭ್ರಷ್ಟಚಾರಿ ಮುಖ್ಯಮಂತ್ರಿ, ಅತ್ಯಾಚಾರಿ ವೇಣುಗೋಪಾಲ್ ರಿಂದ ರಾಜ್ಯ ಲೂಟಿ – ಯಡಿಯೂರಪ್ಪ

    ಮಂಗಳೂರು ನವೆಂಬರ್ 12:ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಪರಿವರ್ತನಾ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ, ಇಂದು ಮಂಗಳೂರಿನಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ಉಡುಪಿಯಲ್ಲಿದ್ದು ಯಾತ್ರೆ ಮುಗಿಸಿ ಮಧ್ಯಾಹ್ನದ ನಂತರ ಕಾರವಾರ ಜಿಲ್ಲೆಗೆ ಹೊಗಲಿದ್ದೇವೆ ಎಂದು ತಿಳಿಸಿದರು.

    ಕರ್ನಾಟಕದ ಕಾಂಗ್ರೇಸ್ ಉಸ್ತುವಾರಿ ವೇಣುಗೋಪಾಲ ಅತ್ಯಚಾರ ಹಗರಣ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಹಗರಣ ಮನೆ ಮಾತಾಗಿದೆ ಎಂದರು. ನನ್ನ ಮೇಲೆ ಆರೋಪ ಸಭೀತುಪಡಿಸಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಧ್ದಾರೆ, ಅವರ ಮೇಲಿರುವ ಡಿನೋಟಿಫಿಕೇಶನ್, ವಾಚ್, ಡೈರಿ ಪ್ರಕರಣ ಹೀಗೆ ಹಗರಣದ ಸರಮಾಲೆ‌ಯನ್ನೆ ಸಿದ್ಧರಾಮಯ್ಯ ಹೊಂದಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಅವರ ಹಗರಣಗಳನ್ನು ಸಿಬಿಐಗೆ ಅಥವಾ ಹೈಕೋರ್ಟ್ ನ್ಯಾಯಾಧೀಶರಿಗೆ ವಹಿಸಿದರೆ ನಿಜ ಬಣ್ಣ ಬಯಲಾಗಲಿದ ಎಂದರು.

    ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ದುರ್ಬಲಗೊಳಿಸಲಾಗಿದೆ, ಎಸಿಬಿಯಲ್ಲಿ ಸಿಎಂ ವಿರುದ್ದ 30 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ, ಆದರೆ ಯಾವುದೇ ತನಿಖೆ ಮಾಡದೆ ಎಫ್ ಐಆರ್ ಕೂಡಾ ದಾಖಲು ಮಾಡಲಾಗಿಲ್ಲ ಎಂದು ಆರೋಪಿಸಿದ ಯಡಿಯೂರಪ್ಪ ಎಸಿಬಿ ಸಂಸ್ಥೆ ಒಂದು ಕ್ಲೀನ್ ಚಿಟ್ ನೀಡುವ ಸಂಸ್ಥೆಯಾಗಿದೆ.

    ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಲವಾರು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ, ಐಎಸ್ಐ ಎಸ್ ಕರ್ನಾಟಕ್ಕೂ ಕಾಲಿಟ್ಟಿದೆ. ಮಂಗಳೂರು ,ಉಡುಪಿ, ಭಟ್ಕಳದಲ್ಲಿ ISIS ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
    ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 3 ತಿಂಗಳೊಳಗಾಗಿ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಕಚೇರಿ ಸ್ಥಾಪಿಸಲು ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply