LATEST NEWS
ರಾವಣನಿಗಿಂತ ಸಿದ್ದರಾಮಯ್ಯ ದುಷ್ಟ – ನಳಿನ್ ಕುಮಾರ್ ಕಟೀಲ್
ರಾವಣನಿಗಿಂತ ಸಿದ್ದರಾಮಯ್ಯ ದುಷ್ಟ – ನಳಿನ್ ಕುಮಾರ್ ಕಟೀಲ್
ಉಡುಪಿ ನವೆಂಬರ್ 12: ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಉಡುಪಿ ತಲುಪಿದೆ. ಇಂದು ಉಡುಪಿಯ ಕಾಪುವಿನಲ್ಲಿ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ರಾವಣನಿಂಗಿತ ಮುಖ್ಯಮಂತ್ರಿ ಸಿದ್ದರಾಮಯ್ಯ ದುಷ್ಟ ಎಂದು ಹೇಳಿದ ಅವರು ರಾವಣ ಕೇವಲ ಸೀತೆಯನ್ನು ಅಪಹರಣ ಮಾತ್ರ ಮಾಡಿದ್ದ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಸಮಾಜ ಒಡೆಯುತ್ತಿದ್ದಾನೆ ಎಂದರು.
ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿರು ಮುಖ್ಯಮಂತ್ರಿ ಸಿದ್ದರಾಮಯ್ಯ , ಗೋವು ಹತ್ಯೆ ಗೆ ಬೆಂಬಲವಾಗಿ ನಿಲ್ಲುತ್ತಿದ್ದಾನೆ, ಹಿಂದೂ ಸಂಸ್ಕೃತಿ ನಾಶ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಆರೋಪಿಸಿದರು.ನಿದ್ರಾದೇವಿ ಕುಂಭಕರ್ಣನ ಮಡದಿ, ಕುಂಭಕರ್ಣ ಸತ್ತನಂತರ ನಿದ್ರಾದೇವಿ ಸಿಎಂ ಸಿದ್ದರಾಮಯ್ಯ ರನ್ನು ಅಪ್ಪಿಕೊಂಡಿದ್ದಾಳೆ ಎಂದು ಅವರು ವ್ಯಂಗ್ಯವಾಡಿದರು.
ಸ್ವಲ್ಪದಿನಗಳಲ್ಲಿ ರಾವಣ ಅಟ್ಟಹಾಸ ಅಡಗಿಸಲು ಯಡಿಯೂರಪ್ಪ ರಾಮಭಕ್ತನಾಗಿ ಬರುತ್ತಾರೆ ಎಂದ ನಳೀನ್, ಯಡಿಯೂರಪ್ಪ ರಾಜ್ಯದಲ್ಲಿ ರಾಜ್ಯಭಾರ ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಡಿಯೂರಪ್ಪ ನಾಶ ಮಾಡುತ್ತಾರೆ ಎಂದು ನಳಿನ್ ಕುಮಾರ್ ಹೇಳಿದರು.
You must be logged in to post a comment Login