KUNDAPURA
ತೆಂಗಿನ ಕಾಯಿ ಹೆಕ್ಕಲು ಹೋಗಿ ನೀರು ಪಾಲು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ತೆಂಗಿನ ಕಾಯಿ ಹೆಕ್ಕಲು ಹೋಗಿ ನೀರು ಪಾಲು
ಉಡುಪಿ, ಮಾರ್ಚ್ 22 : ತೆಂಗಿನಕಾಯಿ ಹೆಕ್ಕಲು ಹೋದ ವ್ಯಕ್ತಿಯೋರ್ವ ನೀರುಪಾಲದ ಘಟನೆ ಉಡುಪಿ ಜಿಲ್ಲೆಯ ಮರಂವತೆಯಲ್ಲಿ ಸಂಭವಿಸಿದೆ.
ಮೃತರನ್ನು ರಿಚರ್ಡ್ ಗೋನ್ಸಾಲ್ವಿಸ್( 58) ಎಂದು ಗುರುತಿಸಲಾಗಿದೆ. ಮರವಂತೆ ಗ್ರಾಮದ ಕಳಿಹಿತ್ಳು ಎಂಬಲ್ಲಿ ಈ ಘಟನೆ ಸಂಭಸಿದೆ. ಹತ್ತಿರದ ಸೌಪರ್ಣಿಕ ನದಿಗೆ ಬಿದ್ದಿದ್ದ ತೆಂಗಿನಕಾಯಿಗಳಳನ್ನು ಹೆಕ್ಕಲು ದೋಣಿಯಲ್ಲಿ ತೆರಳಿದ್ದ ರಿಚರ್ಡ್ ಆಯಾ ತಪ್ಪಿ ದೋಣಿಯಿಂದ ನದಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಲಾಗಿದೆ. ಇಂದು ಮಧ್ಯಾಹ್ನ ಸುಮಾರಿಗೆ ಘಟನೆ ನಡೆದಿದ್ದರೂ ಗಮನಕ್ಕೆ ಸಂಜೆ 5 ಗಂಟೆ ಸುಮಾರಿಗೆ ರಿಚರ್ಡ್ ಅವರ ಹೆಂಡತಿ ಮನೆಗೆ ಬಂದು ಹುಡುಕಾಟ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ, ಈ ಸಂಬಂಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login