Connect with us

LATEST NEWS

ಕೊಣಾಜೆಯಲ್ಲಿ ಯುವಕನಿಗೆ ಚೂರಿ ಇರಿತ

ಕೊಣಾಜೆಯಲ್ಲಿ ಯುವಕನಿಗೆ ಚೂರಿ ಇರಿತ

ಮಂಗಳೂರು, ಎಪ್ರಿಲ್ 11 : ಮಂಗಳೂರಿನಲ್ಲಿ ಚೂರಿ ಇರಿತ ನಡೆದಿದೆ. ಮಂಗಳೂರು ಪೋಲಿಸ್ ಕಮಿಷನರೇಟ್ ವ್ಯಾಪ್ತಿಯ ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ನಾಟೆಕಲ್ ನಲ್ಲಿ  ಈ ಇರಿತದ ಘಟನೆ ನಡೆದಿದೆ. 

ಸ್ನೇಹಿತನ ಪುತ್ರನಿಗೆ ಹಲ್ಲೆ ನಡೆಸಿದ ವಿಚಾರದಲ್ಲಿ ಪ್ರಶ್ನಿಸಿದ ಯುವಕನಿಗೆ ಚೂರಿಯಿಂದ ಇರಿಯಲಾಗಿದೆ.

ಗಾಯಾಳುವನ್ನು ಕಿನ್ಯ ಹಿದಾಯತ್ ನಗರದ ಮಹಮ್ಮದ್ ಸಿದ್ದಿಕಿ ಎಂದು ಗುರುತ್ತಿಸಲಾಗಿದೆ. ಇಲ್ಲಿನ ನಾಟೆಕಲ್ ನಲ್ಲಿ ಮಂಗಳವಾರ ತಡ ರಾತ್ರಿ ಈ ಘಟನೆ ಸಂಭವಿಸಿದೆ.

ನಾಟೆಕಲ್ ನಿವಾಸಿ ಅಜ್ಮಲ್ ಚೂರಿ ಇರಿದ ಅರೋಪಿಯಾಗಿದ್ದು,ಆರೋಪಿಅಜ್ಮಲ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಿರಿಯ ಪೋಲಿಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕೊಣಾಜೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *