Connect with us

LATEST NEWS

ಕೊಲೆ ಮಾಡುತ್ತೇವೆ ಎಂದವರನ್ನು ಮೊದಲು ಅರೆಸ್ಟ್ ಮಾಡಿ – ಸಚಿವ ದಿನೇಶ್ ಗುಂಡೂರಾವ್ ಎದುರಲ್ಲೇ ಮುಸ್ಲಿಂ ಮುಖಂಡನ ಆಕ್ರೋಶ-

ಮಂಗಳೂರು ಮೇ 31: ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಗೆ ವಿರುದ್ದ ಸ್ಥಳೀಯ ಕಾಂಗ್ರೇಸ್ ಮುಖಂಡರೊಬ್ಬರು ಇತ್ತೀಚೆಗಿನ ಹತ್ಯೆ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.


ಮಾಧ್ಯಮಗಳ ಜೊತೆ ದಿನೇಶ್ ಗುಂಡೂರಾವ್ ಮಾತನಾಡುತ್ತಿರುವ ವೇಳೆ ಉಳ್ಳಾಲ ನಗರಸಭೆ ಮಾಜಿ‌ ಸದಸ್ಯ ಉಸ್ಮಾನ್ ಕಲ್ಲಾಪು ಮದ್ಯ ಮಾ ಮಾತನಾಡಿದ್ದಾರೆ. ಈ ವೇಳೆ ದಿನೇಶ್ ಗುಂಡೂರಾವ್ ಗರಂ ಆಗಿದ್ದು, ಅವರನ್ನು ಹೊರಗೆ ಹಾಕಿ ಎಂದಿದ್ದಾರೆ.

ಸುದ್ದಿಗೋಷ್ಠಿ‌ ಮುಗಿಸಿ ಹೊರಬರುತ್ತಿದ್ದಾಗ ಆಕ್ರೋಶ ಮತ್ತೆ ಉಳ್ಳಾಲ ನಗರಸಭೆ ಮಾಜಿ‌ ಸದಸ್ಯ ಉಸ್ಮಾನ್ ಕಲ್ಲಾಪು ಆಕ್ರೋಶ ವ್ಯಕ್ತಪಡಿಸಿದ್ದು, ಎರಡು ದಿನಗಳ ಮೊದಲು ಕೊಲೆ ಮಾಡುತ್ತೇವೆ ಎಂದವರನ್ನು ಅರೆಸ್ಟ್ ಮಾಡಿ ಎಂದರು. ಉಸ್ಮಾನ್ ನನ್ನು‌ ಸಮಾಧಾನ ಪಡಿಸಲು ಯತ್ನಸಿದ ಉಳಿದ ಮುಸ್ಲಿಂ ಮುಖಂಡರು, ಆದರೆ ಆಕ್ರೋಶ ಹೆಚ್ಚಾಗುತ್ತಿದ್ದಂತೆ ದಿನೇಶ್ ಗುಂಡುರಾವ್ ಅಲ್ಲಿಂದ ಹೊರ ನಡೆದಿದ್ದಾರೆ.


ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಉಸ್ಮಾನ್ ಕಲ್ಲಾಪು, ಬಜಪೆ ಚಲೋದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸಬೇಕು, ಕೊಲ್ಲಬೇಕು ಎಂದು ಸಿನಿಮಾದ ಶೈಲಿಯಲ್ಲಿ ಹೇಳಿಕೆ ನೀಡುತ್ತಾರೆ, ಅವರನ್ನು ಮೊದಲು ಬಂಧಿಸಿ, ಯಾರ ಜೀವ ಹೋಗಬಾರದು ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯುತವಾಗಿ ಇರಬೇಕು ಎಂಬ ಉದ್ದೇಶ ನಮ್ಮದು. ನಾವು ಕಾಂಗ್ರೆಸ್ ನಾಯಕರೇ, ನಮ್ಮದೇ ಸರ್ಕಾರ ಇದೆ,ಪೋಲಿಸ್ ಇಲಾಖೆಗೆ ಅದೇಶ ಕೊಡಿ ತಪ್ಪು ಮಾಡಿದವರನ್ನು ಬಂಧಿಸಿ. ಫೇಸ್ ಬುಕ್ ನಲ್ಲಿ ಬರೆದ್ರೆ ತಕ್ಷಣ ಬಂಧಿಸುತ್ತಾರೆ. ನಮಗೆ ಸಪೋರ್ಟ್ ಮಾಡುವುದು ಬೇಡ,ನಮಗೆ ನ್ಯಾಯ ಕೊಡಿ ಅಸ್ಟೆ , ಹೊಸ ಅಧಿಕಾರಿಗಳು ಬಂದಿದ್ದಾರೆ ಅವರ ಮೇಲೆ ವಿಶ್ವಾಸ ಇದೆ ಎಂದರು.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *