Connect with us

    DAKSHINA KANNADA

    ಅನ್ಯಮತೀಯರಿಂದ ಅಪ್ರಾಪ್ತ ಬಾಲಕಿ ರಕ್ಷಿಸಿದ್ದಕ್ಕೆ ಗಡಿಪಾರು ಮಾಡಲಾಗುತ್ತಿದೆ – ಮುರಳೀಕೃಷ್ಣ ಹಸಂತಡ್ಕ

    ಪುತ್ತೂರು ನವೆಂಬರ್ 16: ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡಲು ಕಾರಣಕೇಳಿ ನೋಟಿಸ್ ಜಾರಿ ಮಾಡಿದ್ದನ್ನು ಭಜರಂಗದಳ ಖಂಡಿಸಿದ್ದು. ಪೋಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂ ಸಂಘಟನೆಯನ್ನು ಮಟ್ಟ ಹಾಕುತ್ತೀರಿ ಎಂದು ಭಾವಿಸಿದರೆ ಅದು ತಪ್ಪಾಗುತ್ತೆ, ಇದಕ್ಕೆ ತಕ್ಕ ಉತ್ತರ ನೀಡುವಷ್ಟು ಶಕ್ತವಾಗಿದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಹೇಳಿದ್ದಾರೆ.


    ಪುತ್ತೂರಿನಲ್ಲಿ ಮಾತನಾಡಿದ ಅವರು ಅಪ್ರಾಪ್ತ ಬಾಲಕಿಯನ್ನು ಅನ್ಯಮತೀಯನಿಂದ ರಕ್ಷಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಯುವಕರ ಮೇಲೆ ಗಡಿಪಾರಿನ ಆದೇಶ ಹೊರಡಿಸಲಾಗಿದೆ. ಬಾಲಕಿಯನ್ನು ರಕ್ಷಿಸಿ ಅವರ ಪೋಷಕರ ಕೈಗೆ ಒಪ್ಪಿಸಲಾಗಿತ್ತು, ಈ ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಆರೋಪಿ ಸುಳ್ಳು ದೂರು ದಾಖಲಿಸಿದ್ದ, ಆ ಪ್ರಕರಣದಲ್ಲಿದ್ದ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ ಗಡಿಪಾರು ಮಾಡುವ ಕಾರಣ ಕೇಳಿ ನೋಟೀಸ್ ಹೊರಡಿಸಲಾಗಿದೆ.

    ಗಡಿಪಾರಿನ ನೋಟೀಸ್ ಜಾರಿ ಮಾಡಿರುವ ನಾಲ್ಕು ಯುವಕರು ಕೂಲಿ ಕೆಲಸ,ಆಟೋ ಚಾಲಕರಾಗಿ ದುಡಿಯುವವರು, ಪೋಲೀಸ್ ಇಲಾಖೆ ಹೊರಡಿಸಿದ ನೋಟೀಸ್ ನಲ್ಲಿ ಯುವಕರನ್ನು ಕೋಮುವಾದಿಗಳು, ರೌಡಿಶೀಟರ್ ಗಳು ಎಂದು ಗುರುತಿಸಲಾಗಿದೆ. ಈ ರೀತಿ ಹಿಂದೂ ಸಂಘಟನೆಯನ್ನು ಮಟ್ಟ ಹಾಕಲು ಸರಕಾರ ಚಿಂತಿಸಿದರೆ ಸರಕಾರದ ಈ ಚಿಂತನೆ ಯಾವತ್ತೂ ಈಡೇರಲ್ಲ. ಗೃಹ ಸಚಿವರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತೇವೆ, ಪೋಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂ ಸಂಘಟನೆಯನ್ನು ಮಟ್ಟ ಹಾಕುತ್ತೀರಿ ಎಂದು ಭಾವಿಸಿದರೆ ಅದು ತಪ್ಪಾಗುತ್ತೆ. ಹಿಂದೂ ಸಮಾಜ ಜಾಗೃತಗೊಂಡಿದೆ ಇದಕ್ಕೆ ತಕ್ಕ ಉತ್ತರ ನೀಡುವಷ್ಟು ಶಕ್ತವಾಗಿದೆ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply