DAKSHINA KANNADA
ಪುತ್ತೂರು – ಮುಂಬೈ ಜಾಹಿರಾತು ಫಲಕ ದುರಂತದ ಬಳಿಕ ಜಿಲ್ಲೆಯಲ್ಲೂ ಅಪಾಯಕಾರಿ ಜಾಹಿರಾತು ಫಲಕ ತೆರವುಗೊಳಿಸಲು ಮುಂದಾದ ಅಧಿಕಾರಿಗಳು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಪುತ್ತೂರು ಮೇ 15: ಮುಂಬೈನಲ್ಲಿ ಇತ್ತೀಚೆಗೆ ಬಂದ ಬಿರುಗಾಳಿಗೆ ಭಾರೀ ದೊಡ್ಡ ಗಾತ್ರದ ಜಾಹಿರಾತು ಫಲಕ ಪೆಟ್ರೋಲ್ ಪಂಪ್ ಮೇಲೆ ಬಿದ್ದು 14ಕ್ಕೂ ಅಧಿಕ ಮಂದಿ ಸಾವನಪ್ಪಿದ್ದರು. ಈ ಪ್ರಕರಣದ ಬೆನ್ನಲ್ಲೇ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಅಪಾಯಕಾರಿಯಾಗಿರುವ ಜಾಹಿರಾತು ಫಲಕಗಳನ್ನು ತೆಗೆಯಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಜಿಲ್ಲಾಧಿಕಾರಿಯವರು ಈಗಾಗಲೇ ಎಲ್ಲಾ ನಗರ ಪಾಲಿಕೆ,ನಗರಸಭೆ, ಪುರಸಭೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನಲೆ ಉಪವಿಭಾಗದ ಕಡೆಯಿಂದ ನಾವು ಕೂಡ ಅಪಾಯಕಾರಿ ಜಾಹೀರಾತು ಫಲಕ ಮತ್ತು ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಒಂದು ವಾರದ ಗಡು ನೀಡಲಾಗಿದೆ ಎಂದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಇನ್ನು ಮಳೆಗಾಲದ ಮೊದಲು ರಾಜ ಕಾಲುವೆಗಳ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಉಪ ವಿಭಾಗದ ಎಲ್ಲಾ ಸೇತುವೆ,ರಾಜ ಕಾಲುವೆ ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ.
You must be logged in to post a comment Login