LATEST NEWS
ಕೇಮಾರು ಶ್ರೀಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶ
ಕೇಮಾರು ಶ್ರೀಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶ
ಮಂಗಳೂರು ಜುಲೈ 24: ಶಿರೂರು ಶ್ರೀಗಳ ಅಸಹಜ ಸಾವಿನ ಬಗ್ಗೆ ಮಾತನಾಡಿದ್ದಕ್ಕೆ ಕೇಮಾರು ಶ್ರೀಗೆ ಬೆದರಿಕೆಯ ಸಂದೇಶ ರವಾನಿಸಲಾಗಿದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಶ್ರೀಗಳಿಗೆ ಬೆದರಿಕೆ ಬರಹವನ್ನು ಕಳುಹಿಸುವ ಮೂಲಕ ಟೀಕಿಸಲಾಗುತ್ತಿದೆ. ಸೋದೆ ಮಠದ ಆಪ್ತವರ್ಗದಿಂದ ಹಾಗೂ ಪೇಜಾವರ ಶ್ರೀ ಶಿಷ್ಯ ವರ್ಗದಿಂದಲೂ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಬರಹಗಳ ಮುಖಾಂತರ ಬೆದರಿಸಿ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಇತ್ತೀಚೆಗೆ ಶೀರೂರು ಸಾವಿನ ರಹಸ್ಯದ ತನಿಖೆಗೆ ಕೇಮಾರು ಶ್ರೀ ಒತ್ತಾಯಿಸಿದ್ದರು. ಬೆದರಿಕೆ ಸಂಬಂಧಿಸಿದಂತೆ ಅಗತ್ಯಬಿದ್ದರೆ ದೂರು ನೀಡಲು ಕೇಮಾರು ಸ್ವಾಮೀಜಿ ನಿರ್ಧರಿಸಿದ್ದಾರೆ.
You must be logged in to post a comment Login