Connect with us

    LATEST NEWS

    ಪೊಲೀಸ ತನಿಖೆಯಿಂದ ಪರಾರಿಯಾಗಲು ಯತ್ನಿಸಿದ್ದ ಶಿರೂರು ಸ್ವಾಮಿಜಿ ಆಪ್ತೆ ರಮ್ಯಾ ಶೆಟ್ಟಿ

    ಪೊಲೀಸ ತನಿಖೆಯಿಂದ ಪರಾರಿಯಾಗಲು ಯತ್ನಿಸಿದ್ದ ಶಿರೂರು ಸ್ವಾಮಿಜಿ ಆಪ್ತೆ ರಮ್ಯಾ ಶೆಟ್ಟಿ

    ಮಂಗಳೂರು ಜುಲೈ 24: ಶಿರೂರು ಶ್ರೀ ಅಸಹಜ ಸಾವು ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದ ಶೀರೂರು ಸ್ವಾಮೀಜಿ ಆಪ್ತೆ ರಮ್ಯಾ ಶೆಟ್ಟಿ ಪರಾರಿಯಾಗಲು ಯತ್ನಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಉಡುಪಿ ಪೊಲೀಸರ ವಿಚಾರಣೆಯ ಬಳಿಕ ರಮ್ಯಾ ಅವರನ್ನು ಪೊಲಿಸರು ಬಿಡುಗಡೆಗೊಳಿಸಿದ್ದರು. ಬಿಡುಗಡೆಯಾದ ಬಳಿಕ ಉಡುಪಿಯಿಂದ ಪರಾರಿಯಾಗಲು ರಮ್ಯಾ ಶೆಟ್ಟಿ ಯತ್ನಿಸಿದ್ದಾರೆ. ಇತರ ಮೂವರು ಮಹಿಳೆಯರೊಂದಿಗೆ ಬುರ್ಖಾ ಹಾಕಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಬಳಿ ಪೊಲಿಸರಿಂದ ಮತ್ತೆ ಬಂಧನಕೊಳಪಟ್ಟಿದ್ದಾಳೆ.

    ಕಳೆದ ಭಾನುವಾರ ಮಾರುತಿ ಯರ್ಟಿಗಾ ಕಾರಿನಲ್ಲಿ ಇತರ ಮೂವರು ಮಹಿಳೆಯೊಂದಿಗೆ ಉಡುಪಿಯಿಂದ ಪರಾರಿಯಾಗುತ್ತಿದ್ದ ಸಂದರ್ಭ ಬೆಳ್ತಂಗಡಿಯ ಅಳದಂಗಡಿ ಶೀ ಸತ್ಯದೇವತೆ ದೇವಸ್ಥಾನ ಬಳಿ ಕಾರು ಟಯರ್ ಪಂಕ್ಚರ್ ಆಗಿದ್ದು ಈ ಸಂದರ್ಭದಲ್ಲಿ ಸ್ಥಳೀಯರಿಗೆ ಸಂಶಯ ಬಂದು ವಿಚಾರಣೆ ನಡೆಸಿದ್ದಾರೆ.

    ಈ ಸಂದರ್ಭ ಶಿರೂರು ಸ್ವಾಮಿಜಿಯ ಆಪ್ತೆಯ ರಮ್ಯಾ ಶೆಟ್ಟಿ ವಿಷಯ ಬೆಳಕಿಗೆ ಬಂದಿದೆ. ಸ್ಥಳೀಯರು ರಮ್ಯಾ ಶೆಟ್ಟಿಯನ್ನು ಹಿಡಿದು ವೇಣೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವೇಣೂರು ಪೊಲೀಸರು ರಮ್ಯಾ ಶೆಟ್ಟಿಯನ್ನು ಉಡುಪಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply