LATEST NEWS
ಶಿರೂರು ಶ್ರೀಗಳ ಕೊಣೆಯಲ್ಲಿ ಕಾಂಡೋಮ್, ಸ್ಯಾನಿಟರಿ ಪ್ಯಾಡ್ ಪತ್ತೆ
ಶಿರೂರು ಶ್ರೀಗಳ ಕೊಣೆಯಲ್ಲಿ ಕಾಂಡೋಮ್, ಸ್ಯಾನಿಟರಿ ಪ್ಯಾಡ್ ಪತ್ತೆ
ಉಡುಪಿ ಜುಲೈ 24: ಉಡುಪಿ ಶಿರೂರು ಮಠದ ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅಸಹಜ ಸಾವಿನ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಮಧ್ಯೆ ಶ್ರೀಕೃಷ್ಣ ಮಠದ ಪಕ್ಕದಲ್ಲಿರುವ ಶಿರೂರು ಮಠದಲ್ಲೂ ಪೊಲೀಸರು ತಪಾಸಣೆ ನಡೆಸುತ್ತಿದ್ದು, ತಪಾಸಣೆಗೆ ತೆರಳಿದ್ದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಶಿರೂರು ಮಠದಲ್ಲಿ ರಾಶಿ ರಾಶಿ ಮದ್ಯ ತುಂಬಿದ ಬಾಟಲ್ ಗಳು ಸಿಕ್ಕಿದ್ದು ಅದರಲ್ಲೂ ಲಕ್ಷ ರೂಪಾಯಿ ಬೆಲೆ ಬಾಳುವ ಮದ್ಯದ ಬಾಟಲಿಗಳು ದೊರೆತಿವೆ.
ಶಿರೂರು ಶ್ರೀಗಳ ಮಠದ ಕೊಣೆಯನ್ನು ತಪಾಸಣೆ ನಡೆಸಿದ್ದ ಪೊಲೀಸರಿಗೆ ಇನ್ನೊಂದು ಅಚ್ಚರಿ ಕಾದಿತ್ತು. ಶಿರೂರು ಶ್ರೀಗಳ ಕೊಣೆಯಲ್ಲಿ ಕಾಂಡೋಮ್, ಸ್ಯಾನಿಟರಿ ಪ್ಯಾಡ್ ಗಳು ಪತ್ತೆಯಾಗಿವೆ. ಈ ಕೊಣೆಗೆ ಶಿರೂರು ಶ್ರೀಗಳನ್ನು ಬಿಟ್ಟರೆ ಬೇರೆ ಯಾರಿಗೂ ಪ್ರವೇಶ ಇರಲಿಲ್ಲ ಎಂದು ಹೇಳಲಾಗಿದೆ.
ಶಿರೂರು ಶ್ರೀಗಳ ಅಸಹಜ ಸಾವಿನ ತನಿಖೆಯನ್ನು ಮುಂದುವರೆಸಿರುವ ಪೊಲೀಸರು ಶೀರೂರು ಸ್ವಾಮೀಜಿಗೆ ಸಂಪರ್ಕ ವಿದ್ದ ಮೊದಲ ಮಹಿಳೆಯ ಪುತ್ರನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಶಿರೂರು ಸ್ವಾಮೀಜಿಗೆ ಇಬ್ಬರು ಮಹಿಳೆಯರ ಸಂಪರ್ಕವಿತ್ತು ಎಂದು ಹೇಳಲಾಗಿತ್ತು, ಇದರಲ್ಲಿ ಮೊದಲ ಮಹಿಳೆಯ ಪುತ್ರನ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ ಎಂದು ಹೇಳಲಾಗಿದೆ.
ಈ ನಡುವೆ ಮಠದ ಸಿಸಿಟಿವಿಯ ಡಿವಿಆರ್ ನಾಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆದಿದೆ, ನಂಬಲರ್ಹ ಮೂಲಗಳಿಂದ ಮಠದಿಂದ ನಾಪತ್ತೆಯಾಗಿರುವ ಎರಡು ಡಿವಿಆರ್ ಗಳಲ್ಲಿ ಒಂದು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಪತ್ತೆಯಾಗಿರುವ ಡಿವಿಆರ್ ನಲ್ಲಿ ಶಿರೂರು ಶ್ರೀಗಳ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳು ಇದೆ ಎಂದು ಹೇಳಲಾಗಿದೆ.
You must be logged in to post a comment Login