LATEST NEWS
ಮಣಿಶಂಕರ್ ಅಯ್ಯರ್ ಅಮಾನತು ಕಣ್ಣೊರೆಸುವ ತಂತ್ರ – ಶೋಭಾ ಕರಂದ್ಲಾಜೆ
ಮಣಿಶಂಕರ್ ಅಯ್ಯರ್ ಅಮಾನತು ಕಣ್ಣೊರೆಸುವ ತಂತ್ರ – ಶೋಭಾ ಕರಂದ್ಲಾಜೆ
ಉಡುಪಿ ಡಿಸೆಂಬರ್ 8: ಕಾಂಗ್ರೆಸ್ ಮಾನಸಿಕತೆಯನ್ನ ಮಣಿಶಂಕರ್ ಅಯ್ಯರ್ ಸಾಭೀತು ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಡ ಹಿಂದುಳಿದ ಜಾತಿಯವರು ಪ್ರಧಾನಿ ಆದರೆ ನೀಚ ಎಂದು ಕಾಂಗ್ರೇಸ್ ನವರು ಕರೆಯುತ್ತಾರೆ. ಮೋದಿ ಜಾತಿಯಿಂದ ಹೀನರು ಅನ್ನೊ ಕಾರಣಕ್ಕೆ ನೀಚ ಅಂದಿದ್ದಾ? ಎಂದು ಪ್ರಶ್ನೆ ಮಾಡಿದರು. ಮಣಿಶಂಕರ್ ಅಯ್ಯರ್ ಅಮಾನತು ಕೇವಲ ಕಣ್ಣೊರೆಸುವ ತಂತ್ರ ಎಂದು ಹೇಳಿದ ಶೋಭಾಕರಂದ್ಲಾಜೆ, ಇದು ಕಾಂಗ್ರೆಸ್ ಗೆ ಬಹಳ ದುಬಾರಿ ಆಗುತ್ತೆ ಎಂದು ಎಚ್ಚರಿಸಿದರು. ಚುನಾವಣೆಯಲ್ಲಿ ಗುಜರಾತ್ ಜನ ಕಾಂಗ್ರೆಸ್ ಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಕಾಂಗ್ರೇಸ್ ನ ವಂಶಾಡಳಿತಕ್ಕೆ ದೇಶ ಬರೆದುಕೊಟ್ಟಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
You must be logged in to post a comment Login