Connect with us

    KARNATAKA

    ಸಕಲೇಶಪುರ: ಅಂಗನವಾಡಿ ಆವರಣದಲ್ಲಿ ಹಾವು ಕಚ್ಚಿ ಬಾಲಕ ಸಾವು

    ಸಕಲೇಶಪುರ, ಡಿಸೆಂಬರ್ 24: ಅಂಗನವಾಡಿ ಕೇಂದ್ರದ ಆವರಣದಲ್ಲಿ ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹಾಸನದ ಸಕಲೇಶಪುರದ ದೊಡ್ಡಕಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಬಾಲಕ ರೋಷನ್ ಮೃತಪಟ್ಟಿದ್ದಾನೆ.

    ಯಶ್‌ವಂತ್ ಹಾಗೂ ಗೌರಿ ಅವರ ಪುತ್ರ ರೋಷನ್‌ಗೆ ಹಾವು ಕಚ್ಚಿದ ತಕ್ಷಣವೇ ಆತನನ್ನು ಹೆತ್ತೂರು ಪ್ರಾಥಮಿಕ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಸಕಲೇಶಪುರದ ಆಸ್ಪತ್ರೆಗೆ ತೆರಳಿ ಎಂದಿದ್ದಾರೆ. ಆಂಬುಲೆನ್ಸ್‌ಗೆ ಪೋಷಕರು ಕರೆ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಂದಿಲ್ಲ.

    ಹಾಗಾಗಿ ಗಾಡಿಯಲ್ಲೇ ರೋಷನ್ ಜೊತೆ ಪೋಷಕರು ತೆರಳಿದ್ದಾರೆ. ಮಾರ್ಗ ಮಧ್ಯೆ ಆಂಬುಲೆನ್ಸ್ ಬಂದಿದೆ. ಆದರೆ ಅಷ್ಟರೊಳಗೆ ಬಾಲಕ ಮೃತಪಟ್ಟಿದ್ದಾನೆ. ಈ ಮಾರ್ಗದಲ್ಲಿ ಓಡಾಡುವುದು ಒಂದೇ ಆಂಬುಲೆನ್ಸ್. ಈ ಆಂಬುಲೆನ್ಸ್ ಸರಿಯಾಗಿ ಬಂದಿಲ್ಲ ಎಂದು ಪೋಷಕರು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply