LATEST NEWS
ಸ್ವಿಗ್ಗಿ ಟೀ ಶರ್ಟ್ ಧರಿಸಿ ಬಂಕ್ ಮ್ಯಾನೇಜರ್ ಹಲ್ಲೆ ಮಾಡಿ 4.20 ಲಕ್ಷ ದೋಚಿದ ದುಷ್ಕರ್ಮಿಗಳು
ಮಂಗಳೂರು ಸೆಪ್ಟೆಂಬರ್ 29: ಬ್ಯಾಂಕ್ ಗೆ ಹಣ ಕಟ್ಟಲು ತೆರಳುತ್ತಿದ್ದ ಪೆಟ್ರೋಲ್ ಬಂಕ್ ಮ್ಯಾನೇಜರ್ಗೆ ದುಷ್ಕರ್ಮಿಗಳು ಹಲ್ಲೆ ಮಾಡಿ 4.20 ಲಕ್ಷ ರೂಪಾಯಿ ದೋಚಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದಾರೆ. ನಗರದ ಮಣ್ಣಗುಡ್ಡದ ಐಶ್ವರ್ಯ ಪೆಟ್ರೋಲ್ ಬಂಕ್ ಮ್ಯಾನೇಜರ್ ಬೋಜಪ್ಪ ಎಂಬವರಿಂದ 4.20 ಲಕ್ಷ ರೂಪಾಯಿ ಹಣವನ್ನು ದುಷ್ಕರ್ಮಿಗಳು ದೋಚಿದ್ದಾರೆ.
ಬೋಜಪ್ಪನವರು ಬ್ಯಾಂಕ್ಗೆ ಹಣ ಡೆಪಾಸಿಟ್ ಮಾಡಲ ನಗರದ ಚಿಲಿಂಬಿ ಎಂಬಲ್ಲಿಗೆ ಹಣದೊಂದಿಗೆ ಹೋಗುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಬೋಜಪ್ಪ ಅವರ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿ ಹಣದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಸ್ವಿಗ್ಗಿ ಟೀಶರ್ಟ್ ಧರಿಸಿ ಬಂದಿದ್ದು, ಹಣದೊಂದಿಗೆ ಪರಾರಿಯಾಗಿದ್ದಾರೆ. ಪ್ರಕರಣದ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
You must be logged in to post a comment Login