LATEST NEWS
ಹುಲಿಯಾದ ರಮಾನಾಥ ರೈ
ಹುಲಿಯಾದ ರಮಾನಾಥ ರೈ
ಬೆಂಗಳೂರು ಅಕ್ಟೋಬರ್ 2: ವನ್ಯಜೀವಿ ಸಪ್ತಾಹದ ಅಂಗವಾಗಿ ಲಾಲ್ಬಾಗ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುಲಿವೇಷ ಕುಣಿತ ಆಯೋಜಿಸಲಾಗಿತ್ತು. ತಾಳಕ್ಕೆ ತಕ್ಕಂತೆ ಹುಲಿವೇಷಧಾರಿಗಳು ಕುಣಿಯುತ್ತಿದ್ದರು. ಇಲ್ಲಿಗೆ ಆಗಮಿಸಿದ ಅರಣ್ಯ ಸಚಿವ ರಮಾನಾಥ ರೈ ಅವರು ಹುಲಿ ವೇಷಧಾರಿಗಳೊಂದಿಗೆ ತಾವೂ ಹೆಜ್ಜೆ ಹಾಕಿದರು.
ಮೊದಲೇ ಅಜಾನುಬಾಹು ಆಗಿರುವ ರಮಾನಾಥ ರೈ ಅವರು ಕುಣಿದರೆಂದರೆ ಹೇಗಿರಬೇಕು, ನೀವೇ ಊಹಿಸಿ. ಆದರೆ, ಆ ಕುಣಿತದ ಜೋಷ್ ಹಾಗೇ ಇರುತ್ತದೆ. ಆ ತಾಳವನ್ನು ಅರಿತವರಿಗೆ ನೆಲದ ಮೇಲೆ ನಿಲ್ಲಲು ಆಗುವುದಿಲ್ಲ.
ದಕ್ಷಿಣ ಕನ್ನಡ ಭಾಗದಿಂದ ಬಂದಿದ್ದ ರಮಾನಾಥ ರೈ ಅವರಿಗೆ ಹುಲಿವೇಷ ಕುಣಿತವೆಂದರೆ ಮೊದಲೇ ಖುಷಿ. ಆ ಖುಷಿಯನ್ನು ಇಂದು ತಾವೂ ಕುಣಿಯುವ ಮೂಲಕ ವ್ಯಕ್ತಪಡಿಸಿದರು. ಇವರ ಕುಣಿತ ನೋಡಿ ಜತೆಯಲ್ಲಿದ್ದ ಪ್ರಕಾಶ್ ರೈ, ಪುನಿತ್ ರಾಜ್ಕುಮಾರ್ ಅವರು ಕೂಡ ಸಣ್ಣದಾಗಿ ಹೆಜ್ಜೆ ಹಾಕುತ್ತಿದ್ದರು.
You must be logged in to post a comment Login