Connect with us

KARNATAKA

ಕನ್ನಡಿಗರ ಬಾಯ್ಕಾಟ್ ಅಭಿಯಾನಕ್ಕೆ ಬೆಚ್ಚಿಬಿದ್ದ ಫೋನ್ ಪೇ ಸಿಇಓ – ಕ್ಷಮೆಯಾಚನೆ

ಬೆಂಗಳೂರು ಜುಲೈ 22: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆ ನಾಚಿಕೆಗೇಡು ಎಂದು ಟೀಕಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾ ಗಿದ್ದ ಫೋನ್ ಪೇ ಪೇಮೆಂಟ್ ಆ್ಯಪ್‌ನ ಸಂಸ್ಥಾಪಕ ಸಮೀರ್ ನಿಗಮ್, ತಮ್ಮ ಹೇಳಿಕೆ ಕುರಿತು ಕರ್ನಾಟಕ ಮತ್ತು ಕನ್ನಡಿಗರ ಬಳಿ ಬೇಷರತ್ ಕ್ಷಮೆ ಕೇಳಿದ್ದಾರೆ.

ಬಾಯ್ಕಾಟ್ ಫೋನ್ ಪೇ ಅಭಿಯಾನ ವ್ಯಾಪಕವಾದ ಬೆನ್ನಲ್ಲೇ ‘ಕರ್ನಾಟಕ ಮತ್ತು ಕನ್ನಡಿಗರನ್ನು ಅವಮಾನಿಸುವ ಉದ್ದೇಶವಿರ ಲಿಲ್ಲ. ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ನೀಡಿದ ಬೆಂಬಲಕ್ಕೆ ಸದಾ ಕೃತಜ್ಞನಾಗಿ ದ್ದೇನೆ’ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮೀರ್ ನಿಗಮ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ, ಬಾಯ್ಕಾಟ್ ಫೋನ್ ಪೇ ಅಭಿಯಾನ ಆರಂಭಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *