Connect with us

    UDUPI

    ಅಡ್ಕದಕಟ್ಟೆಯ ಬಳಿ ತ್ರಿಕೋನಾಕಾರದ ಶಾಸನ ಪತ್ತೆ.!.

    ಉಡುಪಿ ಫೆಬ್ರವರಿ 20: ತ್ರಿಕೋನಾಕಾರದ ಹಳೆಯ ಶಾಸನವೊಂದು ಪತ್ತೆಯಾದ ಘಟನೆ ಉಡುಪಿ ನಿಟ್ಟೂರಿನ ಪಂಚ ಧೂಮಾವತಿ ದೈವಸ್ಥಾನದ ಬಳಿ ನಡೆದಿದೆ.


    ರಸ್ತೆ ಅಗಲೀಕರಣದ ಸಂದರ್ಭ ಈ ತ್ರಿಕೋನಾಕಾರದ ಶಾಸನ ಮಣ್ಣಿನಲ್ಲಿ ಹೂತು ಹೋಗಿದ್ದು, ಅದನ್ನು ಸ್ವಚ್ಛಗೊಳಿಸಿದಾಗ ಅದರ ಮೇಲ್ಭಾಗದಲ್ಲಿ ಸೂರ್ಯ ಚಂದ್ರ. ದೊಡ್ಡ ಕಣ್ಣು ಇರುವ ಮಾನವನ ದೇಹ ಕೈಯಲ್ಲಿ ಆಯುಧಗಳು ಕಂಡು ಬಂದಿದೆ.


    ಈ ಬಗ್ಗೆ ಮಾಹಿತಿ ನೀಡಿದ ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಪ್ರೊ, ಟಿ ಮುರುಗೇಶಿ ಅವರು ಇದು ಗರಡಿ ಕಲ್ಲು ಎಂದು ತಿಳಿಸಿದ್ದಾರೆ. ಈ ಶಾಸನ ಅರ್ಧ ಕಿಲೋಮೀಟರ್ ಮುಂದಕ್ಕೆ ಚಲಿಸಿದರೆ ಮೂಡ ನಿಡಂಬೂರು ಗರಡಿಯು ಇದೆ, ಒಟ್ಟಿನಲ್ಲಿ ಗರಡಿಯಲ್ಲಿ ಅಭ್ಯಾಸ ಮಾಡುವಾಗ. ಅಥವಾ ಯುದ್ಧ ಮಾಡುವಾಗ ಯಾರಾದರೂ ವೀರಮರಣ ಹೊಂದಿದರೆ. ಅಂಥವರಿಗೆ ಇಂತಹ ಕಲ್ಲುಗಳನ್ನು ಇಟ್ಟು ನೆನಪಿಸಿಕೊಳ್ಳುತ್ತಾರೆ ಎಂದು ಪ್ರೊ, ಟಿ. ಮುರುಗೇಶೀ ತಿಳಿಸಿದ್ದಾರೆ, ಈ ಭಾಗದಲ್ಲಿ ಮತ್ತೆ ಮತ್ತೆ ವೀರಗಲ್ಲು. ಗರಡಿ ಕಲ್ಲು ಕಾಣಸಿಗುತ್ತಿರುವುದು. ಮತ್ತು ಅವುಗಳನ್ನು ಸೂಕ್ತ ರೀತಿಯಲ್ಲಿ ಅಲ್ಲಿಯೇ ಅಕ್ಕ ಪಕ್ಕದಲ್ಲಿ ಸಂರಕ್ಷಣೆ ಮಾಡುವುದು. ಸ್ಥಳೀಯರೆಲ್ಲರ ಸಹಕಾರವು ಅಗತ್ಯ ಎಂದು ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

     

     

    Share Information
    Advertisement
    Click to comment

    You must be logged in to post a comment Login

    Leave a Reply