LATEST NEWS
ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗದ ಕಾಟ – ವಾಹನ ಸವಾರರಿಗೆ ಪರದಾಟ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಚಿಕ್ಕಮಗಳೂರು ಮೇ 14: ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗದ ಕಾಟಕ್ಕೆ ವಾಹನ ಸವಾರರು ಪರದಾಡುವಂತ ಸ್ಥಿತಿಗೆ ತಲುಪಿದ್ದಾರೆ.
ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸೋ ಚಾರ್ಮಾಡಿ ಘಾಟ್ ನಲ್ಲಿ ಕಳೆದ ಎರಡು ಮೂರುದಿನಗಳಿಂದ ಒಂಟಿ ಸಲಗದ ಕಾಟ ಜೋರಾಗಿದೆ. ರಾತ್ರಿ ವೇಳೆಯಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಕಾಣಸಿಗುವ ಒಂಟಿಸಲಗದಿಂದಾಗಿ ಆನೆಯ ಚಲನವಲನ ನೋಡಿ ವಾಹನಗಳು ಮುಂದೆ ಸಾಗುವಂತಾಗಿದೆ. ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ರಾತ್ರಿ ವೇಳೆ ಕಾಣ ಸಿಗುವ ಒಂಟಿ ಸಲಗದಿಂಗ ಭಯದಿಂದಲೇ ಕಾಡಾನೆ ದಾಟಿ ವಾಹನಗಳು ಸಾಗುತ್ತಿವೆ. ದೊಡ್ಡ-ದೊಡ್ಡ ವಾಹನಗಳಂತೂ ಮುಂದೆ ಸಾಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದಿನದಿಂದ ನಿರಂತರವಾಗಿ ರಸ್ತೆಯಲ್ಲಿ ಕಾಣಿಸಿಕೊಳ್ತಾ ಇರೋ ಕಾಡಾನೆಯನ್ನು ಸ್ಥಳಾಂತರಿಸಲು ಆಗ್ರಹಿಸಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login