Connect with us

    LATEST NEWS

    ದೀಪಕ್ ಹತ್ಯೆಯಲ್ಲಿ ಟಾರ್ಗೆಟ್ ಗ್ರೂಪಿನ ಪಾತ್ರ ಇಲ್ಲ : ಸಚಿವ ಖಾದರ್

    ದೀಪಕ್ ಹತ್ಯೆಯಲ್ಲಿ ಟಾರ್ಗೆಟ್ ಗ್ರೂಪಿನ ಪಾತ್ರ ಇಲ್ಲ : ಸಚಿವ ಖಾದರ್

    ಮಂಗಳೂರು,ಜನವರಿ 05 : ದೀಪಕ್ ಹತ್ಯೆಯಲ್ಲಿ ಟಾರ್ಗೆಟ್ ಗ್ರೂಪಿನ ಪಾತ್ರ ಇಲ್ಲ. ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಮತ್ತು ದೀಪಕ್ ಹತ್ಯೆಗೆ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

    ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಾಟಿಪಳ್ಳದಲ್ಲಿ ಯುವಕ  ದೀಪಕ್ ರಾವ್ ಹತ್ಯೆ ತನಗೆ ತುಂಬಾ ನೋವನ್ನು ತಂದಿದೆ. ಸರ್ಕಾರ ನೀಡುವ  ಪರಿಹಾರದಿಂದ ಕುಟುಂಬದ ನೋವನ್ನು ತುಂಬಲು ಸಾಧ್ಯವಿಲ್ಲ.

    ಆದರೆ ಜಿಲ್ಲೆಯಲ್ಲಿ ತಲೆ  ಎತ್ತುತ್ತಿರುವ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ಸರ್ಕಾರ  ಧೃಡ ನಿರ್ಧಾರ ತೆಗೆದುಕೊಂಡಿದೆ ಎಂದರು.

    ಟಾರ್ಗೆಟ್ ಗುಂಪಿನ ಲೀಡರ್ ಜೊತೆ ಸಂಬಂಧ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಉಳ್ಳಾಲದಲ್ಲಿ ಟಾರ್ಗೆಟ್ ಗ್ರೂಪ್ ಇಲ್ಲ.

    ಹತ್ತು ವರ್ಷದ ಮೊದಲು ಟಾರ್ಗೆಟ್ ಗ್ರೂಪ್ ಇತ್ತು.

    ಪೊಲೀಸರು ಓಡಿಸಿದ ನಂತರ ಉಳ್ಳಾಲದಲ್ಲಿ ಗ್ರೂಪ್ ಇಲ್ಲ. ನಂತರ ಕಾಟಿಪಳ್ಳದಲ್ಲಿ ಟಾರ್ಗೆಟ್ ಗುಂಪಿನವರು ನೆಲೆಸಿದ್ದರು.

    ಈ ಮೊದಲು ಟಾರ್ಗೆಟ್ ಗ್ರೂಪಿನಲ್ಲಿದ್ದ ಇಲ್ಯಾಸ್ ಮತ್ತು ದೀಪಕ್ ಹತ್ಯೆಗೆ ಯಾವುದೇ ಸಂಬಂಧ ಇಲ್ಲ. ನನ್ನ ಮತ್ತು ಕ್ಷೇತ್ರದ ಜನರ ನಡುವೆ ವೈಮನಸ್ಸು ತರುವ ಪ್ರಯತ್ನ  ಕೆಲವರು ಮಾಡುತ್ತಿದ್ದಾರೆ ಮತ್ತು ಈ ಮೂಲಕ ನನ್ನ ರಾಜಕೀಯ ತೇಜೋವಧೆ ಮಾಡಲು ಯತ್ನಿಸಲಾಗುತ್ತಿದೆ.

    ಯಾವುದೋ ಫೋಟೊ ಹಿಡಿದು ತೇಜೋವಧೆ ಮಾಡುತ್ತಿದ್ದಾರೆ.

    ಹಿಂದೆ ಝುಬೈರ್ ಕೊಲೆ ಪ್ರಕರಣದಲ್ಲಿಯೂ ಇಂಥದ್ದೇ ಅಪಪ್ರಚಾರ ನಡೆದಿತ್ತು ಎಂದು ಆರೋಪಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply