DAKSHINA KANNADA
ಮೈಸೂರು ಒಡೆಯರ್ ಯದುವೀರ್ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ
ಮೈಸೂರು ಒಡೆಯರ್ ಯದುವೀರ್ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ
ಪುತ್ತೂರು,ನವಂಬರ್ 2: ಮೈಸೂರು ಅರಮನೆಯ ಯದುವೀರ ಕೃಷ್ಣರಾಜ ಒಡೆಯರ್ ಇಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿರುವ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಮುಂಜಾನೆ ಕ್ಷೇತ್ರಕ್ಕೆ ಆಗಮಿಸಿದ ಅವರು ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿರುವ ಕೋದಂಡರಾಮನ ಹಾಗೂ ಪಂಚಮುಖಿ ಆಂಜನೇಯನ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಿಸಿದರು.
ಕ್ಷೇತ್ರಕ್ಕೆ ಬಂದಾಗ ಮನಸ್ಸಿಗೆ ಮುದ ದೊರೆಯುತ್ತದೆ. ಈ ಕಾರಣಕ್ಕಾಗಿ ದಕ್ಷಿಣಕನ್ನಡ ಜಿಲ್ಲೆಯ ಭಾಗಕ್ಕೆ ಬಂದಾಗಲೆಲ್ಲಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಇದು ಮೂರನೇ ಭೇಟಿಯಾಗಿದೆ. ನಾಡಿನ ಸಮಸ್ತ ಜನರಿಗೆ ಸುಖ ಶಾಂತಿ ಲಭಿಸಲಿ, ನಾಡಿನಲ್ಲಿ ಸುಭೀಕ್ಷೆ ನೆಲೆಸಲಿ ಎಂದು ದೇವರಲ್ಲಿ ಬೇಡಿದ್ದೇನೆ ಎಂದು ಅವರು ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಯದುವೀರ್ ಪತ್ನಿ ತೃಷಿಕಾ ಕುಮಾರಿ ಗರ್ಭಿಣಿಯಾಗಿದ್ದು, ಆಕೆ ಸುಖ ಪ್ರಸವಕ್ಕೂ ದೇವರಲ್ಲಿ ಯದುವೀರ್ ಬೇಡಿಕೊಂಡಿದ್ದಾರೆ.
Facebook Comments
You may like
ಮೂತ್ರ ವಿಸರ್ಜನೆಗೆ ಹೋಗಿದ್ದ ಲಾರಿ ಚಾಲಕನ್ನು ತುಳಿದು ಸಾಯಿಸಿದ ಕಾಡಾನೆ
ಶೂಟಿಂಗ್ ಸೆಟ್ಗೆ ಹೋಗಿ ಜಗ್ಗೇಶ್ ವಿರುದ್ದ ಗರಂ ಆದ ದರ್ಶನ್ ಫ್ಯಾನ್ಸ್…ಕ್ಷಮೆ ಕೇಳಿದ ನಟ ಜಗ್ಗೇಶ್
ಅಪ್ರಾಪ್ತ ಬಾಲಕಿ ಮೇಲೆ ಸ್ವಂತ ಅಣ್ಣ ಹಾಗೂ ದೊಡ್ಡಪ್ಪನಿಂದ ಅತ್ಯಾಚಾರ
ಯಕ್ಷರಂಗದ ಸಿಡಿಲಮರಿ ಡಾ. ಶ್ರೀಧರ್ ಭಂಡಾರಿ ಇನ್ನಿಲ್ಲ
ಭಾಂದವ್ಯ ಟ್ರೋಫಿ ಎತ್ತಿದ ಪೊಲೀಸ್ ಇಲೆವೆನ್… ರನ್ನರ್ಸ್ ಆದ ಪ್ರೆಸ್ ಇಲೆವೆನ್…!!!
ಗ್ರಾಮಸ್ಥರ ಮೇಲೆ ದಾಳಿ ನಡೆಸಿ ಮರವೇರಿ ಕುಳಿತಿದ್ದ ಚಿರತೆ ಸೆರೆ
You must be logged in to post a comment Login