Connect with us

LATEST NEWS

ರಮಾನಾಥ ರೈ ಸಾಮರಸ್ಯ ಯಾತ್ರೆಗೆ ಹೇಗೆ ಅನುಮತಿ ನೀಡುತ್ತೀರಿ ನೋಡ್ತೀವಿ : ಸಂಸದ ನಳಿನ್ ಎಚ್ಚರಿಕೆ

ಪುತ್ತೂರು ಸೆಪ್ಟೆಂಬರ್ 05: ರಾಜ್ಯ ಸರಕಾರ ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿರುವ ಬೈಕ್ Rally ಯನ್ನು ತಡೆಯಲು ಹಿಂಬಾಗಿಲ ಮೂಲಕ ತುರ್ತುಪರಿಸ್ಥಿತಿಯನ್ನು ಹೇರುತ್ತಿದೆ ಎಂದು ದಕ್ಷಿಣಕನ್ನಡ ಸಂಸದ ನಳಿನ ಕುಮಾರ್ ಕಟೀಲ್ ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ನಡೆದಂತಹ 11 ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಪಿಎಫ್ಐ ಸಂಘಟನೆಯನ್ನು ನಿಶೇಧಿಸುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಸೆಪ್ಟಂಬರ್ 7 ರಂದು ಮಂಗಳೂರು ಚಲೋ ಬೈಕ್ ರಾಲಿಯನ್ನು ಹಮ್ಮಿಕೊಂಡಿದೆ.

ರಾಜ್ಯ ಸರಕಾರ ತುರ್ತು ಪರಿಸ್ಥಿತಿ ಹೇರಿಕೆ ಪ್ರಯತ್ನ

ಕಾಂಗ್ರೇಸ್ ಸೋಲಿನ ಭೀತಿಯಲ್ಲಿ ಇದನ್ನು ಹಿಂಬಾಗಿಲಿನಿಂದ ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ತಡೆಯುತ್ತಿದೆ ಎಂದು ಆರೋಪಿಸಿದ ಅವರು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟದ ಹಕ್ಕಿದ್ದು, ಬಿಜೆಪಿ ನಡೆಸುತ್ತಿರುವ ಹೋರಾಟವನ್ನು ದಮನಿಸಲು ನಡೆಸುವ ಸರಕಾರದ ಹುನ್ನಾರವನ್ನು ತಡೆಯುವ ಶಕ್ತಿ ಬಿಜೆಪಿ ಪಕ್ಷಕ್ಕಿದೆ ಎಂದ ಅವರು ಬೈಕ್ ರಾಲಿಯನ್ನು ನಡೆಸಿಯೇ ಸಿದ್ಧ ಎಂದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ರಮಾನಾಥ ರೈ ಸಾಮರಸ್ಯ ಯಾತ್ರೆ

ಸೆಪ್ಟಂಬರ್ 12 ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನಡೆಸಲು ಉದ್ಧೇಶಸಿರುವ ಸಾಮರಸ್ಯ ಯಾತ್ರೆಯೂ ಕೂಡಾ ಕೋಮುಸೂಕ್ಷ್ಮ ಪ್ರದೇಶದಲ್ಲೇ ಸಾಗಲಿಕ್ಕಿದ್ದು, ಅದಕ್ಕೆ ಪೋಲೀಸರು ಹೇಗೆ ಅನುಮತಿ ಕೊಡುತ್ತಾರೆ ಎನ್ನುವುದನ್ನೂ ನಾವು ನೋಡಿಕೊಳ್ಳುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *