ಮಂಗಳೂರು ಸೆಪ್ಟೆಂಬರ್ 5: ಬಿಜೆಪಿ ಯುವಮೋರ್ಚಾ ಸೆಪ್ಟೆಂಬರ್ 7 ರಂದು ಆಯೋಜಿಸಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ Rally ಗೆ ರಾಜ್ಯದೆಲ್ಲೆಡೆ ಪೊಲೀಸ್ ಇಲಾಖೆ ನಿರ್ಭಂದ ಹೇರಿದೆ. ಇದು ಸಂಘಪರಿವಾರದ ಸಂಘಟನೆಗಳನ್ನು ಕೆರಳಿಸಿದೆ.
Table Of Content
ವಿಎಚ್ ಪಿ , ಬಜರಂಗದಳ ಎಂಟ್ರಿ
ರಾಜ್ಯ ಸರಕಾರ ಪ್ರತಿಭಟನಾ Rally ಗೆ ಅನುಮತಿ ನಿರಾಕರಿಸಿರುವುದನ್ನು ವಿರೋಧಿಸಿ ಬಜರಂಗದಳ ಹಾಗು ವಿಶ್ವ ಹಿಂದು ಪರಿಷತ್ ಫಿಲ್ಡಿಗಿಳಿಯಲು ತಿರ್ಮಾನಿಸಿವೆ. ಈ ನಿಟ್ಟಿನಲ್ಲಿ ಬಜರಂಗದಳ ಹಾಗು ವಿ ಎಚ್ ಪಿ ಮುಖಂಡರ ಬೈಟಕ್ ಇಂದು ಮಂಗಳೂರಿನಲ್ಲಿ ಕರೆಯಲಾಗಿದೆ. ಮಂಗಳೂರು ನಗರದಲ್ಲಿ ಶಾಂತಿ ಕದಡುವ ಆತಂಕದ ಹಿನ್ನೆಲೆಯಲ್ಲಿ ಬೈಕ್ Rally ನಗರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಮಂಗಳೂರು ಪೋಲಿಸ್ ಆಯುಕ್ತರಾದ ಟಿ. ಆರ್. ಸುರೇಶ್ ತಿಳಿಸಿದ್ದಾರೆ.
ಮಂಗಳೂರು ಚಲೋ ಬೈಕ್ Rally
ಬಿಜೆಪಿ ಯುವ ಮೋರ್ಚಾ ದ ವತಿಯಿಂದ ರಾಜ್ಯದ 5 ಭಾಗಳಿಂದ ಮಂಗಳೂರು ಚಲೋ ಪ್ರತಿಭಟನಾ ಬೈಕ್ Rally ಇಂದಿನಿಂದ ಆರಂಭಗೊಳ್ಳಲಿದೆ. ಬೆಂಗಳೂರು, ಹುಬ್ಬಳ್ಳಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರಿನಿಂದ ಬೈಕ್ Rally ಹೊರಡಲಿದ್ದು ಸೆಪ್ಟೆಂಬರ್ 6 ರಂದು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಮಾಡಲಿದೆ. ಆದರೆ ಬಿಜೆಪಿ ಯುವಮೋರ್ಚಾ ದ ಈ ಬೈಕ್ Rally ಗೆ ರಾಜ್ಯ ದೆಲ್ಲೆಡೆ ನಿರ್ಭಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮಂತ್ರಕ್ಕೆ ಬಿಜೆಪಿ ತಿರು ಮಂತ್ರ ರೂಪಿಸಿದೆ.
ಕಾರ್ಯಕರ್ತರಿಗೆ ಜಿಲ್ಲಾ ಬಿಜೆಪಿಯಿಂದ ವ್ಯವಸ್ಥೆ ಬಗ್ಗೆ ಮಾಹಿತಿ
ಮಂಗಳೂರಿಗೆ ಆಗಮಿಸುವ ಯುವ ಮೋರ್ಚಾದ ಕಾರ್ಯಕರ್ತರಿಗೆ ಎಲ್ಲಾ ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಬಲ ಪ್ರಯೋಗದ ಮೂಲಕ ಬೈಕ್ Rallyಯನ್ನು ತಡೆಯಲು ಪ್ರಯತ್ನಿಸಿದರೆ ರಸ್ತೆಯಲ್ಲೆ ಪ್ರತಿಭಟನಾ ಧರಣಿ ನಡೆಸಲು ಸೂಚನೆ ನೀಡಲಾಗಿದ್ದು. ಯಾವುದೇ ಕಾರಣಕ್ಕೂ ಪ್ರತಿಭಟನಾ Rally ಮೊಟಕು ಗೊಳಿಸುವ ಪ್ರಶ್ನೆಯೇ ಇಲ್ಲ, ಎಲ್ಲಾ ಕಾರ್ಯಕರ್ತರು ಬೈಕ್ ಜಾಥಾದಲ್ಲಿ ಪಾಲ್ಗೊಳ್ಳಲು ಸಾಮಾಜಿಕ ಜಾಲತಾಣಗಳ ಮೂಲಕ ಕರೆ ನೀಡುತ್ತಿದ್ದಾರೆ.
ವಿಡಿಯೋಗಾಗಿ..