Connect with us

    LATEST NEWS

    ಕಾರ್ಕಳ ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಮೊಯ್ಲಿ ಮಗ

    ಕಾರ್ಕಳ ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಮೊಯ್ಲಿ ಮಗ

    ಉಡುಪಿ, ಮಾರ್ಚ್ 27 : ರಾಜ್ಯದಲ್ಲಿ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಮಗ ಹರ್ಷ ಮೊಯಿಲಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ.

    ಈ ಬಗ್ಗೆ ಸ್ವತ ಹರ್ಷ ಮೊಯಿಲಿ ಅವರು ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

    ಕಾರ್ಕಳ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದು,

    ಗೋಪಾಲ್ ಭಂಡಾರಿ ಅವರನ್ನೇ ಸ್ಪರ್ಧೆಗಿಳಿಸಲು ನಾನು ಮತ್ತು ನಮ್ಮ ತಂದೆ ನಿರ್ಧರಿಸಿದ್ಧೇವೆ.

    ಇದೇವೇಳೆ, ಕಾಂಗ್ರೆಸ್​ನಲ್ಲಿ ಟಿಕೆಟ್ ಮಾರಾಟಕ್ಕಿವೆ ಎಂಬ ಟ್ವೀಟ್ ವಿವಾದದ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಅದು ಮುಗಿದ ಅಧ್ಯಾಯವೆಂದು ಕೆ.ಸಿ. ವೇಣುಗೋಪಾಲ್ ಅವರೇ ಹೇಳಿದ್ದಾರೆ.

    ಟ್ವೀಟ್​ಗೂ ಟಿಕೆಟ್​ಗೂ ಯಾವುದೇ ಸಂಬಂಧವಿಲ್ಲ  ಎಂದು ಸ್ಪಷ್ಟನೆ ನೀಡಿದ್ದಾರೆ.

    ಅದು ಬೇರಾರೋ ಮಾಡಿರುವ ಟ್ವಿಟ್, ನಮ್ಮ ಟ್ವಿಟ್ಟರ್ ಹ್ಯಾಂಡಲ್ ನೋಡಿಕೊಳ್ಳುತ್ತಿದ್ದವರನ್ನ ಕೆಲಸದಿಂದ ಕಿತ್ತು ಹಾಕಿದ್ದೇವೆ.

    ತಂದೆಯೊಂದಿಗೆ ಹರ್ಷ ಮೊಯಿಲಿ

    ಕೆಪಿಸಿಸಿಯಿಂದ ಬಂದ ನೋಟಿಸ್​ಗೂ ಹಲವು ದಿನಗಳ ಹಿಂದೆಯೇ ಉತ್ತರ ಕೊಟ್ಟಿದ್ದೇನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಕಚೇರಿಯಿಂದ ಉತ್ತರ ನೀಡಿದ್ದಕ್ಕೆ ತಕ್ಕ ರಶೀದಿಯನ್ನೂ ಪಡೆದಿರುತ್ತೇನೆ.

    ಈ ಟ್ವೀಟ್​ಗೂ ತಮ್ಮ ತಂದೆ ಹಾಗೂ ತನಗೂ ನೇರ ಸಂಬಂಧ ಇಲ್ಲ.

    ಟ್ವಿಟ್ಟರ್ ಹ್ಯಾಂಡಲ್ ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಅಚಾತುರ್ಯದಿಂದ ಈ ಘಟನೆ ನಡೆದಿದೆ.

    ನಾನು ಮತ್ತು ನನ್ನ ತಂದೆ ಜೀವಮಾನದಲ್ಲಿ ಎಂದೂ ಕಾಂಗ್ರೆಸ್ ವಿರೋಧಿ ಕೆಲಸ ಮಾಡಿದವರಲ್ಲ.

    ಈ ಘಟನೆ ಮುಗಿದ ಅಧ್ಯಾಯ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು..

     

    Share Information
    Advertisement
    Click to comment

    You must be logged in to post a comment Login

    Leave a Reply