Connect with us

LATEST NEWS

ದತ್ತಪೀಠಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್

ದತ್ತಪೀಠಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್

ಕಾರ್ಕಳ ನವೆಂಬರ್ 29: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮದು ದತ್ತಾತ್ರೇಯ ಗೋತ್ರ ಎಂದು ಘೋಷಿಸಿದ ಹಿನ್ನಲೆಯಲ್ಲಿ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.

ಡಿಸೆಂಬರ್ 22 ರಂದು ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ಉತ್ಸವ ನಡೆಯಲಿದ್ದು, ಚಿಕ್ಕಮಗಳೂರಿನ‌ ದತ್ತಪೀಠಕ್ಕೆ ನೀವು ಬನ್ನಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ಶಾಸಕ‌ ಹಾಗೂ ಮುಖ್ಯ ಸಚೇತಕ ಸುನಿಲ್ ಕುಮಾರ್ ಆಹ್ವಾನ ನೀಡಿದ್ದಾರೆ.

ವಿಧಾನಸಭಾ ವಿಪಕ್ಷ ಮುಖ್ಯ ಸಚೇತರ ಸುನೀಲ್ ಕುಮಾರ್ ತಮ್ಮ ಟ್ವೀಟ್ ನಲ್ಲಿ ಮಾತನಾಡಿ, ಡಿಸೆಂಬರ್ 22 ಚಿಕ್ಕಮಗಳೂರು ದತ್ತಪೀಠದಲ್ಲಿ ದತ್ತ ಜಯಂತಿ ಉತ್ಸವ ನಡೆಯಲಿದೆ. ಚಿಕ್ಕಮಗಳೂರಿನ ದತ್ತಪೀಠಕ್ಕೆ ನೀವು ಬನ್ನಿ.

ನಲ್ವತ್ತು ವರ್ಷಗಳ ಬಳಿಕ ನಿಮ್ಮ ಗೋತ್ರದ ಬಗ್ಗೆ ಘೋಷಣೆಯಾಗಿದೆ. ನಿಮ್ಮದು ದತ್ತಾತ್ರೇಯ ಗೋತ್ರವಾಗಿರುವುದರಿಂದ ನೀವು ದತ್ತಪೀಠಕ್ಕೆ ಬರಲೇಬೇಕೆಂದು ವಿಡಿಯೋ ಮಾಡಿ ಕಾಲೆಳೆದಿದ್ದಾರೆ.

ದತ್ತಾತ್ರೇಯ ಗೋತ್ರದ ನೀವು‌ ದತ್ತಪೀಠಕ್ಕೆ ಬರಬೇಕು. ದತ್ತ ಜಯಂತಿಯಲ್ಲಿ ನೀವು ನಮ್ಮ‌ ಜೊತೆ ಪಾಲ್ಗೊಳ್ಳಬೇಕು. ಈ ಮೂಲಕ ದಶಕದಿಂದ ಇರುವ ದತ್ತಪೀಠದ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನ‌ ಮಾಡಿ ಎಂದು ಹೇಳಿದ್ದಾರೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *