DAKSHINA KANNADA
ದೇವಸ್ಥಾನಕ್ಕೆ ಜಾಗ ಖರೀದಿಗೆ ಕಂಡೀಷನ್ ಹಾಕ್ತಾ ಇದ್ದ ಕೇಸ್ ವರ್ಕರ್ ನ ತರಾಟೆ ತೆಗೆದುಕೊಂಡ ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು ಮಾರ್ಚ್ 05 :ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಜಾಗದ ವಿಚಾರದಲ್ಲಿ ಸತಾಯಿಸುತ್ತಿದ್ದ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಯನ್ನು ಶಾಸಕ ಅಶೋಕ್ ಕುಮಾರ್ ರೈ ತರಾಟೆಗೆತ್ತಿಕೊಂಡ ಘಟನೆ ಮಂಗಳವಾರ ನಡೆಯಿತು.
ಎಸಿ ಸಹಾಯಕ ಆಯುಕ್ತರ ಕಚೇರಿಗೆ ದಿಡೀರನೆ ಭೇಟಿ ನೀಡಿದ ಶಾಸಕರು, ಕೇಸ್ ವರ್ಕರ್ ಪೂವಪ್ಪ ಅವರನ್ನು ತರಾಟೆಗೆತ್ತಿಕೊಂಡರು. ನಾನು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ನಾನೇನು ನನ್ನ ಮನೆ ಕೆಲಸಕ್ಕೆ ಕರೆ ಮಾಡಿರುವುದಲ್ಲ. ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ ಎಂದ ಶಾಸಕರು. ಆ ಜಾಗವನ್ನು ಬೇರೆಯವರಿಗೆ ಅವರು ಮಾರಾಟ ಮಾಡ್ತಾರೆ. ನಾನು ಅಭಿವೃದ್ದಿ ಆಗಬೇಕು ಎಂದು ಓಡಾಡಿದರೆ ನೀವು ನಮ್ಮನ್ನು ಸತಾಯಿಸುತ್ತಾ ಇದ್ದಾರೆ.
ನಾನು ಇದನ್ನು ಸಹಿಸುವುದಿಲ್ಲ, ಅಭಿವೃದ್ದಿ ಕೆಲಸದಲ್ಲಿ ಯಾರಾದರೂ ತೊಂದರೆ ಮಾಡಿದರೆ ನಾನು ಸಹಿಸುವದಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು. ದೇವಸ್ಥಾನಕ್ಕೆ ಸಿಗುವ ಜಾಗಕ್ಕೆ ಇಷ್ಟು ಕಂಡೀಶನ್ ಹಾಕಿದ್ರೆ ಹೇಗೆ, ಶನಿವಾರದೊಳಗೆ ಫೈಲ್ ಪುಟಪ್ ಆಗಬೇಕು. ಇಲ್ಲದಿದ್ದರೆ ಶನಿವಾರ ಸಂಜೆ ಕಚೇರಿಗೆ ಆಗಮಿಸುವುದಾಗಿ ಎಚ್ಚರಿಕೆ ನೀಡಿದರು.
You must be logged in to post a comment Login