LATEST NEWS
ಮರವಂತೆ ಕಾರು ಅಪಘಾತ – ಸಮುದ್ರ ಪಾಲಾಗಿದ್ದ ರೋಶನ್ ಮೃತ ದೇಹ ಪತ್ತೆ
ಕುಂದಾಪುರ ಜುಲೈ 04: ರಾಷ್ಟ್ರೀಯ ಹೆದ್ದಾರಿ 66 ಮರವಂತೆ ಸಮೀಪ ಅಪಘಾತಕ್ಕೀಡಾಗಿ ಸಮುದ್ರಪಾಲಾಗಿದ್ದ ಕಾರಿನಲ್ಲಿದ್ದ ಮತ್ತೊಬ್ಬ ಯುವಕನ ಮೃತದೇಹ ಇಂದು ತ್ರಾಸಿಯ ಕುಂಚಗೋಡು ಎಂಬಲ್ಲಿ ಪತ್ತೆಯಾಗಿದೆ.
ಪತ್ತೆಯಾದ ಮೃತದೇಹ ರೋಶನ್ ಆಚಾರ್ ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ತಡರಾತ್ರಿ ಅತಿವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66 ರ ಮರವಂತೆ ಸಮೀಪದ ಪಲ್ಟಿಯಾಗಿ ಮರವಂತೆ ಸಮುದ್ರಕ್ಕೆ ಬಿದ್ದಿತ್ತು. ಈ ಘಟನೆಯಲ್ಲಿ ಕಾರಿನ ಚಾಲಕ ವಿರಾಜ್ ಆಚಾರ್ ಸಾವನಪ್ಪಿದ್ದರೆ, ರೋಶನ್ ಆಚಾರ್ ನೀರುಪಾಲಾಗಿದ್ದರು. ಈ ಹಿನ್ನಲೆ ರವಿವಾರ ಬೆಳಿಗ್ಗೆಯಿಂದಲೇ ವ್ಯಾಪಕ ಶೋಧ ಕಾರ್ಯ ನಡೆಸಲಾಗಿತ್ತು. ಆದರೆ ರೋಶನ್ ಪತ್ತೆ ಸಾಧ್ಯವಾಗಿರಲಿಲ್ಲ. ಇಂದು ತ್ರಾಸಿಯ ಕುಂಚಗೋಡು ಎಂಬಲ್ಲಿ ರೋಶನ್ ಆಚಾರ್ ಮೃತದೇಹ ಪತ್ತೆಯಾಗಿದೆ.
You must be logged in to post a comment Login