Connect with us

    DAKSHINA KANNADA

    ಪುತ್ತೂರಿನಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನಾ ಸಭೆಯಲ್ಲಿ ಇಸ್ಲಾಂ ಧರ್ಮದ ಅವಹೇಳನ-ಮುಸ್ಲಿಂ ಒಕ್ಕೂಟದಿಂದ ಪೊಲೀಸರಿಗೆ ದೂರು

    ಪುತ್ತೂರು ಜುಲೈ 04: ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಟೈಲರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಜೂನ್ 29ರಂದು ಪುತ್ತೂರು ದರ್ಬೆ ಸರ್ಕಲ್‌ನಲ್ಲಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಇಸ್ಲಾಂ ಧರ್ಮದ ಕುರಿತಂತೆ ಅವಹೇಳನಕಾರಿಯಾದಿ ಭಾಷಣ ಮಾಡಲಾಗಿದೆ ಆರೋಪಿಸಿ ಮುಸ್ಲಿಂ ಒಕ್ಕೂಟ ಪೊಲೀಸರಿಗೆ ದೂರು ನೀಡಿದೆ.


    ಭಾಷಣಕಾರರಾದ ಶ್ರೀಕೃಷ್ಣ ಉಪಾಧ್ಯಾಯ ಹಾಗೂ ನರಸಿಂಹ ಮಾಣಿಯವರು ಇಸ್ಲಾಂ ಧರ್ಮವನ್ನು ನಿಂದಿಸಿ ಕೋಮು ಪ್ರಚೋದನೆಯನ್ನು ನಡೆಸಿ, ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಅವರಿಬ್ಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟ ವತಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ಮತ್ತು ಡಿವೈಎಸ್‌ಪಿಗೆ ಎ.2ರಂದು ದೂರು ನೀಡಿದ್ದಾರೆ. ಅನುಮತಿ ಪಡೆಯದೆಯೇ ಪ್ರತಿಭಟನೆ ನಡೆಸಿದ್ದಲ್ಲದೇ ರಸ್ತೆ ಬಂದ್ ಕೂಡಾ ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply