Connect with us

    LATEST NEWS

    ಕಾಪು ಉಮೇಶ್ ಶೆಣೈ(84)ನಿಧನ

    ಮಂಗಳೂರು : ಮಂಗಳೂರು ನಗರದ ಮಣ್ಣಗುಡ್ಡ ನಿವಾಸಿ , ಸಮಾಜ ಸೇವಕ ಕಾಪು ಉಮೇಶ್ ಶೆಣೈ ( 84 ವರ್ಷ ) ನಿಧನರಾಗಿದ್ದಾರೆ.

    ಮಂಗಳೂರು ನಗರದ  ತಮ್ಮ ಸ್ವ ಗ್ರಹದಲ್ಲಿ  ದೈವಾಧೀನರಾದರು. ಸರಳ ಸಜ್ಜನ ವ್ಯಕ್ತಿತ್ವದ  ಕಾಪು ಉಮೇಶ್ ಶೆಣೈ ಅವರು ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಜೊತೆಗೆ  ಹಲವಾರು ವರ್ಗಷಗಳಿಂದ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಕಾಶೀ ಮಠ ಸಂಸ್ಥಾನದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದರು . ಕಾಪು ಉಮೇಶ್ ಶೆಣೈ ಅವರ  ನಿಧನಕ್ಕೆ ಸಮಾಜದ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಖ್ಯಾತ ಛಾಯಾಗ್ರಾಹಕ  ಮಂಜು ನೀರೇಶ್ವಾಲ್ಯ ಸಹಿತ ಇಬ್ಬರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply