Connect with us

    LATEST NEWS

    ಮಂಗಳಾದೇವಿ ದೇವಸ್ಥಾನದ ಯಾತ್ರಿ ನಿವಾಸದ ಕಟ್ಟಡ‌ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

    ಮಂಗಳೂರು ಮಾರ್ಚ್ 27:  ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಯಾತ್ರಿ ನಿವಾಸದ ಕಟ್ಟಡ‌ನಿರ್ಮಾಣ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಶಿಲಾನ್ಯಾಸ ನೆರವೇರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್,ಅತ್ಯಂತ ಪುರಾತನ ದೇವಾಲಯವಾಗಿರುವ ಮಂಗಳಾದೇವಿ ದೇವಸ್ಥಾನಕ್ಕೆ ದೂರದ ಊರುಗಳಿಂದ ಆಗಮಿಸುವ ಭಕ್ತಾಧಿಗಳ‌ಉಪಯೋಗಕ್ಕಾಗಿ ನಿರ್ಮಾಣಗೊಳ್ಳುವ ಯಾತ್ರಿ ನಿವಾಸದ ಕಟ್ಟಡಕ್ಕಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಮೂಲಕ ಮೊದಲ‌ ಹಂತದಲ್ಲಿ 50 ಲಕ್ಷದಂತೆ ಎರಡು ಕಂತುಗಳಾಗಿ ಒಟ್ಟು 1 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಹೆಚ್ಚುವರಿ ಅನುದಾನವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.

    ಸ್ಥಳೀಯ ಕಾರ್ಪೋರೇಟರ್ ಹಾಗೂ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಯಾತ್ರಿ ನಿವಾಸದ ಕಟ್ಟಡ ನಿರ್ಮಾಣಕ್ಕೆ ಜಾಗದ ಸಮಸ್ಯೆ ಉಂಟಾದಾಗ ಶಾಸಕರ ನೇತೃತ್ವದಲ್ಲಿ ಅದನ್ನು ಪರಿಹರಿಸಿ ಸ್ಥಳ ಒದಗಿಸಲಾಗಿದೆ. ನವರಾತ್ರಿ ಸಂದರ್ಭದಲ್ಲಿ ಪಾಲಿಕೆಯ ಮೂಲಕ ಕ್ಷೇತ್ರದ ಪರಿಸರದಲ್ಲಿ ದೀಪಾಲಂಕಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯ ಖರ್ಚನ್ನು ಪಾಲಿಕೆಯಿಂದ ಭರಿಸಲಾಗುತ್ತಿದೆ. ದೇವಸ್ಥಾನದ ದಕ್ಷಿಣ ಭಾಗದಲ್ಲಿರುವ ಜಾಗದಲ್ಲಿ ಅನ್ನಛತ್ರ ನಿರ್ಮಿಸುವ ಯೋಜನೆಯಿತ್ತು. ಅದಕ್ಕೆ ಶಾಸಕರ ಸಹಕಾರದೊಂದಿಗೆ ಪುರಾತತ್ವ ಇಲಾಖೆಯಿಂದ ನಿರಾಪೇಕ್ಷಣಾ ಪತ್ರವನ್ನು ತಂದು ಕಾನೂನಾತ್ಮಕ ತೊಡಕುಗಳನ್ನು ನಿವಾರಿಸುವ‌ ಪ್ರಯತ್ನ‌ ನಡೆಯುತ್ತಿದೆ. ಆ ಮೂಲಕ ಸುಸಜ್ಜಿತ ಅನ್ನಛತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply