Connect with us

    LATEST NEWS

    ರಾಜ್ಯ ಸಮ್ಮಿಶ್ರ ಸರಕಾರ ಇನ್ನು ಒಂದು ತಿಂಗಳಲ್ಲಿ ಪತನ – ಡಿ.ವಿ ಸದಾನಂದ ಗೌಡ

    ರಾಜ್ಯ ಸಮ್ಮಿಶ್ರ ಸರಕಾರ ಇನ್ನು ಒಂದು ತಿಂಗಳಲ್ಲಿ ಪತನ – ಡಿ.ವಿ ಸದಾನಂದ ಗೌಡ

    ಮಂಗಳೂರು ಅಗಸ್ಟ್ 28: ಕಾಂಗ್ರೇಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಬಗ್ಗೆ ಕಾಂಗ್ರೇಸ್ ಶಾಸಕರೇ ಅಪಸ್ವರ ಎತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಸಮ್ಮಿಶ್ರ ಸರಕಾರ ಇನ್ನೊಂದು ತಿಂಗಳಲ್ಲಿ ಪತನವಾಗುವುದು ನಿಶ್ಷಿತ ಎಂದು ಹೇಳಿದರು.

    ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಕುರ್ಚಿಯಿಂದ ಇಳಿಸುವುದೇ ಸಿದ್ರಾಮಯ್ಯ ಗುರಿಯಾಗಿದ್ದು, ಈಗಾಗಲೇ ನಾನೊಬ್ಬ ಅನಾಥ ಶಿಶು ಅನ್ನುವುದನ್ನು ಕುಮಾರಸ್ವಾಮಿಯೇ ಹೇಳ್ತಿದ್ದಾರೆ. ಇಕ್ಕಟ್ಟಿನಲ್ಲಿ ಸಿಲುಕಿ ಅಧಿಕಾರ ನಡೆಸ್ತಿರೋದಾಗಿ ಹೇಳಿಕೊಂಡಿದ್ದರು. ಸಿದ್ದರಾಮಯ್ಯ ದ್ವೇಷ ಶಮನ ಆಗಲು ಸಾಧ್ಯವೇ ಇಲ್ಲ ದ್ವೇಷ ಶಮನ ಆಗಬೇಕಿದ್ದರೆ ಕುಮಾರಸ್ವಾಮಿ ಅಧಿಕಾರದಿಂದ ಇಳಿಯಬೇಕು ಎಂದರು.

    ಸರಕಾರ ಹೆಚ್ಚು ದಿನ ಉಳಿಯಲ್ಲ ಅನ್ನೋದು ನೂರಕ್ಕೆ ನೂರು ಸತ್ಯ ಸ್ವಯಂಕೃತ ಅಪರಾಧದಿಂದಲೇ ಅಧಿಕಾರದಿಂದ ಕೆಳಗಿಳಿಯುತ್ತಾರೆ ಬಿಜೆಪಿ ಯಾವುದೇ ಹಂತದಲ್ಲಿ ಸರಕಾರ ಬೀಳಿಸಲು ಹೋಗಲ್ಲ ಎಂದು ಹೇಳಿದ ಡಿ.ವಿ ಸದಾನಂದ ಗೌಡ.

    ಇನ್ನು ಕೂಡಗಿನ ಪ್ರಾಕೃತಿಕ ವಿಕೋಪದ ಬಗ್ಗೆ ಮಾತನಾಡಿದ ಅವರು ಎನ್.ಡಿ.ಆರ್ ಎಫ್ ಪರಿಹಾರ ಕೊಡುವುದಕ್ಕೆ ಕೆಲವು ಕ್ರಮಗಳಿವೆ.ರಾಜ್ಯ ಸರರ್ಕಾರ ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ದುರಂತಗಳಿಗೆ ಕೇಂದ್ರ ಸರಕಾರ ಪರಿಹಾರ ಕೊಡುವುದಕ್ಕೆ ಸಿದ್ಧವಾಗಿದೆ .ರಾಜ್ಯ ಸರಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಆ ಕೆಲಸಗಳನ್ನು ಬೇಗ ಮುಗಿಸಬೇಕು ಅಂತ ಸಲಹೆ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply