Connect with us

    LATEST NEWS

    ರಾಜ್ಯದಲ್ಲಿ ಅತಂತ್ರ ವಿಧಾನಸಭೆ – ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ

    ರಾಜ್ಯದಲ್ಲಿ ಅತಂತ್ರ ವಿಧಾನಸಭೆ – ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ

    ಉಡುಪಿ ಮಾರ್ಚ್ 28: ಕಳೆದ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ನಿಖರ ಮಾಹಿತಿ ನೀಡಿದ್ದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಈ ಬಾರಿ ರಾಜ್ಯದಲ್ಲಿ ಅತಂತ್ರ ಸರಕಾರ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಜ್ಯೋತಿಷಿ ಅವರ ಅತಂತ್ರ ವಿಧಾನ ಸಭೆ ಭವಿಷ್ಯ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಯಾರಿಗೂ ಬಹುಮತ ದೊರೆಯುವುದು ಅನುಮಾನ ಎಂದು ಹೇಳಿರುವ ಪ್ರಕಾಶ್ ಅಮ್ಮಣ್ಣಾಯ, ಬೆರೆ ಪಕ್ಷಗಳ ಹೊಂದಾಣಿಕೆ ಹೊರತಾಗಿಯೂ ರಾಜ್ಯದಲ್ಲಿ ಲೋಕಸಭಾ ಚುನಾವಣಾ ಜೊತೆಗೆ ಮತ್ತೊಂದು ವಿಧಾನಸಭಾ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ತಲೆದೋರೀತು ಎನ್ನುವ ಆತಂಕವನ್ನು ಮುಂದಿಟ್ಟಿದ್ದಾರೆ.

    ಉಡುಪಿಯ ಕಾಪುವಿನಲ್ಲಿ ವಾಸವಿರುವ ಪ್ರಕಾಶ್ ಅಮ್ಮಣ್ಣಾಯ ಚುನಾವಣಾ ನೀತಿ ಸಂಹಿತಿ ಜಾರಿಯಾದ ಸಮಯ, ಚುನಾವಣಾ ದಿನಾಂಕ ಹಾಗೂ ಫಲಿತಾಂಶ ದಿನಾಂಕವನ್ನು ತಾಳೆ ಹಾಕಿ ಜ್ಯೋತಿರ್ವಿಜ್ಞಾನ ಪ್ರಕಾರ ನೋಡಿದಾಗ ರಾಜ್ಯದಲ್ಲಿ ಅತಂತ್ರ ಸರಕಾರ ಬರುವುದಾಗಿ ತಿಳಿಸಿದ್ದಾರೆ.

    ಚುನಾವಣಾ ಫಲಿತಾಂಶ ದಿನವಾದ ಮೇ 15 ರಂದು ಅಮಾವಾಸ್ಯೆ ದಿನವಾಗಿದೆ ಎಂದು ತಿಳಿಸಿದರು. ಅಲ್ಲದೇ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆದುಕೊಳ್ಳಲಿದೆ. ಆದ್ರೆ ಬಿಜೆಪಿ-ಜೆಡಿಎಸ್ ಅಥವಾ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರೂ ಅದು ಅಲ್ಪಾವಧಿಯ ಸರಕಾರವೇ ಆಗಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸೈದ್ಧಾಂತಿಕ ವಿಚಾರವಾಗಿಯೇ ಪಕ್ಷಗಳ ನಡುವೆ ಭಿನ್ನಮತ ಬಂದು ಸರಕಾರ ಉರುಳಲಿದೆ ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply