DAKSHINA KANNADA
ಕಾಣಿಯೂರು – ಸೇತುವೆಗೆ ಡಿಕ್ಕಿ ಹೊಡೆದು ಕಾರಿನ ಜೊತೆ ಹೊಳೆಗೆ ಬಿದ್ದಿದ್ದ ಇಬ್ಬರ ಮೃತದೇಹ ಪತ್ತೆ…!!
ಕಾಣಿಯೂರು ಜುಲೈ 12: ಎರಡು ದಿನಗಳ ಹಿಂದೆ ಸೇತುವೆಗೆ ಡಿಕ್ಕಿ ಹೊಡೆದು ಕಾರಿನ ಜೊತೆಗೆ ಹೊಳೆಗೆ ಬಿದ್ದಿದ್ದ ಇಬ್ಬರು ಯುವಕರ ಮೃತದೇಹ ಇಂದು ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದ ಪ್ರಕರಣ ಇದಾಗಿತ್ತು.
ಮೃತರನ್ನು ವಿಟ್ಲದ ಧನುಷ್ (25) ಮತ್ತು ಕನ್ಯಾನ ನಿವಾಸಿ ಧನುಷ್ (24) ಇಬ್ಬರೂ ಸೋದರ ಸಂಬಂಧಿಗಳು. ಸೇತುವೆಯಿಂದ 400 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಹೊಳೆಗೆ ಅಡ್ಡಲಾಗಿ ಬಿದ್ದಿರುವ ಮರದಲ್ಲಿ ಮೃತದೇಹ ಸಿಲುಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನಲೆ ಶೋಧ ಕಾರ್ಯ ಮುಂದುವರೆಸಿದ ರಕ್ಷಣಾ ತಂಡಕ್ಕೆ ಸ್ವಲ್ಪ ದೂರದಲ್ಲೇ ಮತ್ತೊಂದು ಶವಪತ್ತೆಯಾಗಿತ್ತು.
ಕಾಣಿಯೂರು ಸಮೀಪದ ಬೈತಡ್ಕ ಸೇತುವೆ ಬಳಿ ಸೇತುವೆಗೆ ಡಿಕ್ಕಿಯಾಗಿ ಕಾರು ನದಿಗೆ ಬಿದ್ದಿತ್ತು. ಈ ಘಟನೆ ಸಿಸಿಟಿವಿ ದೃಶ್ಯಾವಳಿಯಿಂದ ಕಳೆದ ಭಾನುವಾರ ಬೆಳಗ್ಗೆ ತಿಳಿದುಬಂದಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಸಿಕ್ಕಿದ್ದು ನುಜ್ಜುಗುಜ್ಜಾದ ಕಾರು ಮಾತ್ರ. ಇಡೀ ಹೊಳೆಯನ್ನೇ ಜಾಲಾಡಿದರೂ, ಯುವಕರು ಮಾತ್ರ ಪತ್ತೆಯಾಗಿರಲಿಲ್ಲ.
.
You must be logged in to post a comment Login