Connect with us

BANTWAL

ಬಂಟ್ವಾಳ ತಹಶಿಲ್ದಾರ್ ರಶ್ಮಿ ನೇತೃತ್ವದ ಕಾರ್ಯಾಚರಣೆ ಅಕ್ರಮ ಮರಳು ಸಾಗಾಟದ 5 ಲಾರಿ ವಶ

ಬಂಟ್ವಾಳ ತಹಶಿಲ್ದಾರ್ ರಶ್ಮಿ ನೇತೃತ್ವದ ಕಾರ್ಯಾಚರಣೆ ಅಕ್ರಮ ಮರಳು ಸಾಗಾಟದ 5 ಲಾರಿ ವಶ

ಬಂಟ್ವಾಳ ಸೆಪ್ಟೆಂಬರ್ 14: ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 5 ಲಾರಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಮರಳುಗಳನ್ನು ರಾತ್ರಿ ವೇಳೆ ಹೊರ ಜಿಲ್ಲೆಗಳಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಲು ಈ ಲಾರಿಗಳಲ್ಲಿ ತುಂಬಿಸಿಡಲಾಗಿತ್ತು.

ಮದ್ಯರಾತ್ರಿ ರಾತ್ರಿ ಸುಮಾರು 1.30 ರಿಂದ ಕಾರ್ಯಚರಣೆ ಆರಂಭ ಮಾಡಿದ ಬಂಟ್ವಾಳ ತಹಶೀಲ್ದಾರ್ ಎಸ್. ಆರ್ ರಶ್ಮಿ ಅವರ ನೇತೃತ್ವದ ತಂಡ ಮುಂಜಾನೆ ವೇಳೆ ವಿವಿಧ ಕಡೆಗಳಲ್ಲಿ ಐದು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ಪಾಣೆಮಂಗಳೂರು ನರಹರಿ ಬಳಿಯಲ್ಲಿ ಎರಡು ಲಾರಿಗಳನ್ನು , ಮಾರ್ನಬೈಲು ಎಂಬಲ್ಲಿ ಒಂದು ಲಾರಿ , ಚೇಲೂರು ಎಂಬಲಿ ಒಂದು ಹಾಗೂ ವಿಟ್ಲದ ಪಡಿಬಾಗಿಲು ಎಂಬಲ್ಲಿ ಒಂದು ಲಾರಿಯನ್ನು ವಶಕ್ಕೆ ಪಡೆದುಕೊಂಡ ತಹಶೀಲ್ದಾರ್ ರಶ್ಮಿ ಅವರು ಅಕ್ರಮ ಮರಳು ಸಾಗಾಟದ ಲಾರಿ ಚಾಲಕರಿಗೆ ಮುಂಜಾನೆಯ ವೇಳೆ ಬಿಸಿಮುಟ್ಟಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *