LATEST NEWS
ರಾಜ್ಯದಲ್ಲಿ ಸರಕಾರ ಸತ್ತುಹೋಗಿದೆ – ಸಂಸದೆ ಶೋಭಾ ಕರಂದ್ಲಾಜೆ
ರಾಜ್ಯದಲ್ಲಿ ಸರಕಾರ ಸತ್ತುಹೋಗಿದೆ – ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ ಮೇ 30:ರಾಜ್ಯದಲ್ಲಿ ಸರಕಾರ ಇಲ್ಲ ಸರಕಾರ ಸತ್ತುಹೋಗಿದೆ ಕೇವಲ ಮುಖ್ಯಮಂತ್ರಿ ಎಲ್ಲಾ ಖಾತೆ ನಿಭಾಯಿಸುತ್ತಿದ್ದಾರೆ, ಅಧಿಕಾರಿಗಳು ನಿಧಾನಗತಿಯಲ್ಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದೆ ಭೇಟಿ ನೀಡಿದರು. ನಿನ್ನೆ ನೀರಿನಲ್ಲಿ ಕೊಚ್ಚಿಹೋಗಿದ್ದ ಬಾಲಕಿ ನಿಧಿ ಸಾವಿಗೆ ಸಂತಾಪ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಅಕಾಲಿಕ ಮಳೆಗೆ ಸಾವಿರಾರು ಮನೆಗಳು, ಮರಗಳಿಗೆ ಹಾನಿಯಾಗಿದ್ದು ಮೆಸ್ಕಾಂ ಪ್ರಕಾರ 1,000 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಒಂಬತ್ತು ಗಂಟೆಗಳಲ್ಲಿ 270 ಮಿ. ಮೀ. ಮಳೆ ಬಿದ್ದಿದೆ. ರಾಜ್ಯ ಸರಕಾರ ಮಳೆ, ನೆರೆಯಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಪರಿಹಾರ, ಮನೆ ಕಟ್ಟಲು ನೆರವು ನೀಡಬೇಕು. ತೋಟ, ವಾಹನ ಹಾನಿಗೂ ಸೂಕ್ತ ಪರಿಹಾರವನ್ನು ಅಧಿಕಾರಿಗಳ ಜತೆ ಚರ್ಚಿಸಿ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೈಯ್ಯಲ್ಲಿ ಎಲ್ಲಾ ಖಾತೆಗಳಿದ್ದು ಜೆಡಿಎಸ್, ಕಾಂಗ್ರೆಸ್ ಶಾಸಕರು 15ದಿನಗಳನ್ನು ರೆಸಾರ್ಟ್ನಲ್ಲಿ ಕಳೆದು ಈಗ ದಿಲ್ಲಿಯಲ್ಲಿ ಮಂತ್ರಿ ಸ್ಥಾನ, ಖಾತೆಗಾಗಿ ಬೀಡು ಬಿಟ್ಟಿದ್ದಾರೆ, ಲಾಬಿ ನಿರತರಾಗಿದ್ದಾರೆ ಎಂದವರು ಆರೋಪಿಸಿದ್ದಾರೆ.
You must be logged in to post a comment Login