Connect with us

    KARNATAKA

    ಈಶ್ವರಪ್ಪಗೆ ಮೆದುಳಿಲ್ಲ ಅವರೊಬ್ಬ ಬ್ರೈನ್‌ಲೆಸ್‌ ಮ್ಯಾನ್‌, ಮಹಾಪೆದ್ದ – ಸಿದ್ದರಾಮಯ್ಯ

    ಈಶ್ವರಪ್ಪಗೆ ಮೆದುಳಿಲ್ಲ ಅವರೊಬ್ಬ ಬ್ರೈನ್‌ಲೆಸ್‌ ಮ್ಯಾನ್‌, ಮಹಾಪೆದ್ದ – ಸಿದ್ದರಾಮಯ್ಯ

    ಮಂಗಳೂರು ಡಿಸೆಂಬರ್ 3: ಬಾಬರಿ ಮಸೀದಿ ಕಟ್ಟುತ್ತೇವೆ ಎಂಬ ಭರವಸೆ ನೀಡಿ ಕಾಂಗ್ರೆಸ್ ಚುನಾವಣೆ ಎದುರಿಸಲಿ ಎಂಬ ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೆ.ಎಸ್‌.ಈಶ್ವರಪ್ಪಗೆ ಮೆದುಳಿಲ್ಲ. ಅವರೊಬ್ಬ ‘ಬ್ರೈನ್‌ಲೆಸ್‌ ಮ್ಯಾನ್‌’, ಮಹಾಪೆದ್ದ’ ಎಂದು ಹೇಳಿದರು.

    ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು 104 ಶಾಸಕರ ಬಲದಲ್ಲಿ ಸರ್ಕಾರ ರಚಿಸಿ, ವಿಫಲವಾದ ಬಿಜೆಪಿ ಈಗ ಮತ್ತೆ ಹಣ ಹೂಡಿ ಈಗಿನ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

    ಬಿಜೆಪಿ ಶಾಸಕ ಶ್ರೀರಾಮುಲು ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂಬ ಆರೋಪ ಕುರಿತು ಕೇಳಿದಾಗ, ‘ಯಾರ್ರೀ ಅವರು? ಯಾವುದೋ ಪಕ್ಷದವರು ನಮ್ಮ ಶಾಸಕರಿಗೆ ದುಡ್ಡು ಕೊಡುವುದಕ್ಕೆ ನಾಚಿಕೆ ಆಗಲ್ವಾ ಅವರಿಗೆ’ ಎಂದು ಮರುಪ್ರಶ್ನೆ ಕೇಳಿದರು.

    ಕಾಂಗ್ರೆಸ್‌ ಶಾಸಕರಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಶಾಸಕರಲ್ಲಿ ಒಗ್ಗಟ್ಟಿದೆ. ಸತೀಶ್‌ ಜಾರಕಿಹೊಳಿ ಶಾಸಕರನ್ನು ಕರೆದುಕೊಂಡು ರೆಸಾರ್ಟ್‌ಗೆ ಹೋಗುತ್ತಾರೆ ಎಂಬುದು ಸುಳ್ಳು. ಕಾಂಗ್ರೆಸ್‌ನವರು ರೆಸಾರ್ಟ್‌ಗೆ ಹೋಗಲೇಬಾರದಾ? ಬಿಜೆಪಿಯವರು ಅಲ್ಲಿದ್ದಾರೆ ಎಂದ ಮಾತ್ರಕ್ಕೆ ಕಾಂಗ್ರೆಸ್‌ನವರು ಹೋಗಲೇಬಾರದಾ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply