Connect with us

    DAKSHINA KANNADA

    ಪಯಸ್ವಿನಿ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರು ಪಾಲು

    ಸುಳ್ಯ ಫೆಬ್ರವರಿ 12: ಸ್ನಾನಕ್ಕೆಂದು ನದಿಗೆ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಮೃತರನ್ನು ಪುತ್ತೂರು ತಾಲೂಕಿನ ದೇರ್ಲದ ಜಿತೇಶ್ ಪಾಟಾಳಿ (19) ಮತ್ತು ಅಂಬಟೆಮೂಲೆ ನಿವಾಸಿ ಪ್ರವೀಣ್ (19) ಎಂದು ಗುರುತಿಸಲಾಗಿದೆ.


    ಪುತ್ತೂರು ಸಮೀಪದ ಕೌಡಿಚ್ಚಾರ್ ಅಸುಪಾಸಿನ ಆರು ಮಂದಿ ಯುವಕರು ಶನಿವಾರ ಸುಳ್ಯದ ಪಯಸ್ವಿನಿ ನದಿಗೆ ತೆರಳಿದ್ದು, ಅದರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪ್ರವೀಣ್‌ ಮತ್ತು ಜಿತೇಶ್‌ ನದಿಯ ಮಧ್ಯ ಭಾಗದಲ್ಲಿ ತೆರಳಿದ್ದು, ಉಳಿದ ಯುವಕರು ನದಿಯ ಬದಿಯಿಂದ ತೆರಳಿದ್ದರು ಎನ್ನಲಾಗಿದೆ. ನದಿಯಲ್ಲಿ ಅಲ್ಲಲ್ಲಿ ದೊಡ್ಡ ಗುಂಡಿಗಳಿದ್ದು, ಈ ಗುಂಡಿಯ ಬಗ್ಗೆ ಗೊತ್ತಿಲ್ಲದ ಪ್ರವೀಣ್‌ ಅವರು ಅದರಲ್ಲಿ ಕಾಲಿಟ್ಟು ಮುಳುಗಿದ್ದಾರೆ.

    ಇವರನ್ನು ರಕ್ಷಿಸಲು ಹೋದ ಪಕ್ಕದಲ್ಲಿದ್ದ ಜಿತೇಶ್‌ ಕೂಡ ಮುಳುಗಿದ್ದಾರೆ. ಆಗ ಉಳಿದ ನಾಲ್ವರು ಅವರನ್ನು ರಕ್ಷಿಸಲು ಯತ್ನಿಸಿದರಾದರೂ, ವಿಫಲರಾದಾಗ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳೀಯ ನಿವಾಸಿ ಜಯ ಪ್ರಕಾಶ್‌ ಅವರು ಮನೆಯಿಂದ ಓಡಿ ಬಂದು ನದಿಗೆ ಇಳಿದು. ನೀರಿನಲ್ಲಿ ಪೂರ್ಣವಾಗಿ ಮುಳುಗಿದ್ದ ಇಬ್ಬರು ಯುವಕರನ್ನು ಮೇಲಕ್ಕೆತ್ತಿದ್ದರು. ಆದರೇ ಇಬ್ಬರನ್ನು ರಕ್ಷಿಸುವ ಯತ್ನ ವಿಫಲವಾಗಿದ್ದು, ಅಷ್ಟರಲ್ಲಿ ಅವರ ಉಸಿರು ನಿಂತು ಹೋಗಿತ್ತು. ಸ್ನೇಹಿತರಿಬ್ಬರು ಪರಸ್ಪರ ಹಿಡಿದುಕೊಂಡ ಭಂಗಿಯಲ್ಲೆ ಮೃತಪಟ್ಟಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply