LATEST NEWS
ಚುನಾವಣೆ ಸಂದರ್ಭದಲ್ಲಿ ವೈರಿಯನ್ನು ಹೊಗಳಿದ್ದು ಬಿಜೆಪಿಯ ಎಷ್ಟು ವೀಕ್ ಎಂದು ತೋರಿಸುತ್ತದೆ – ಡಿಕೆಶಿ
ಚುನಾವಣೆ ಸಂದರ್ಭದಲ್ಲಿ ವೈರಿಯನ್ನು ಹೊಗಳಿದ್ದು ಬಿಜೆಪಿಯ ಎಷ್ಟು ವೀಕ್ ಎಂದು ತೋರಿಸುತ್ತದೆ – ಡಿಕೆಶಿ
ಉಡುಪಿ ಮೇ 2: ರಾಜ್ಯಕ್ಕೆ ವಿನಯ್ ಕುಮಾರ್ ಕುಮಾರ್ ಸೊರಕೆ ದೊಡ್ಡ ಬಹು ದೊಡ್ಡ ಆಸ್ತಿ. ರಾಜ್ಯದಲ್ಲಿ ಇನ್ನೊಬ್ಬ ವಿನಯ್ ಕುಮಾರ್ ಸೊರಕೆ ಯನ್ನು ತಯಾರಿ ಮಾಡಬೇಕಾದರೆ ಇನ್ನು 25 ವರ್ಷ ಬೇಕಾಗಬಹುದು. ಅಭಿವೃದ್ಧಿಯ ಹರಿಕಾರರಾದ ವಿನಯ್ ಕುಮಾರ್ ಸೊರಕೆಯವರನ್ನು ಉಳಿಸಿಕೊಳ್ಳುವುದು ಕಾಪು ಕ್ಷೇತ್ರದ ಜನತೆಯ ಬಹುದೊಡ್ಡ ಕರ್ತವ್ಯ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಪು ರಾಜೀವ ಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಿರಿಯ ರಾಜಕಾರಣಿ ಜನಾರ್ಧನ ಪೂಜಾರಿಯವರ ನಂತರದ ಸ್ಥಾನವನ್ನು ವಿನಯ್ ಕುಮಾರ್ ಸೊರಕೆ ಸಮರ್ಥವಾಗಿ ತುಂಬಿದ್ದಾರೆ. ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ ಸೊರಕೆಯವರನ್ನು ಈ ಬಾರಿ ಭಾರಿ ಅಂತರದಿಂದ ಗೆಲ್ಲಿಸಿ ಮತ್ತೊಮ್ಮೆ ವಿಧಾನ ಸೌಧಧ ಪಡಸಾಲೆಗೆ ಕಳುಹಿಸ ಬೇಕಾಗಿದೆ ಎಂದು ಡಿಕೆಶಿ ಹೇಳಿದರು.
ಮೋದಿ ಉಡುಪಿ ಸಮಾವೇಶದ ಬಗ್ಗೆ ಮಾತನಾಡಿದ ಡಿಕೆಶಿ ದೇವೆಗೌಡ ರನ್ನು ಹಾಡಿ ಹೊಗಳಿದ ಮೋದಿ ಬಣ್ಣ ಬಯಲಾಗಿದ್ದು ಚುನಾವಣಾ ಸಂದರ್ಭದಲ್ಲಿ ವೈರಿಯನ್ನು ಹೊಗಳಿದ್ದು ಬಿಜೆಪಿ ಎಷ್ಟು ವೀಕ್ ಆಗಿದೆ ಅನ್ನೊದಕ್ಕೆ ಇದೇ ದೊಡ್ಡ ಉದಾಹರಣೆ ಎಂದು ಹೇಳಿದರು.
You must be logged in to post a comment Login