Connect with us

    DAKSHINA KANNADA

    ಕರೋನಾ ನಿಗ್ರಹಕ್ಕಾಗಿ ನಾಳೆ ಗೆಜ್ಜೆಗಿರಿಯಲ್ಲಿ ಮಾತೆ ದೇಯಿ ಬೈದ್ಯೆತಿಗೆ ಶತೌಷಧಿ ದ್ರವ್ಯ ಕಲಶಾಭಿಷೇಕ

    ಕರೋನಾ ನಿಗ್ರಹಕ್ಕಾಗಿ ನಾಳೆ ಗೆಜ್ಜೆಗಿರಿಯಲ್ಲಿ ಮಾತೆ ದೇಯಿ ಬೈದ್ಯೆತಿಗೆ ಶತೌಷಧಿ ದ್ರವ್ಯ ಕಲಶಾಭಿಷೇಕ

    ಪುತ್ತೂರು ಮಾ.15: ಕೊರೊನಾ ಮಾರಿ ನಿಗ್ರಹಕ್ಕಾಗಿ ಸೋಮವಾರ ಗೆಜ್ಜೆಗಿರಿಯಲ್ಲಿ ಮಾತೆ ದೇಯಿ ಬೈದ್ಯೆತಿಗೆ ಶತೌಷಧಿ ದ್ರವ್ಯ ಕಲಶಾಭಿಷೇಕ ನಡೆಸಲು ನಿರ್ಧರಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಮಾ.16ರಂದು ಸೋಮವಾರ ಮಹಾಮಾತೆಗೆ ಕ್ಷೇತ್ರದ ತಂತ್ರಿಗಳಾದ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಕಲಶಾಭಿಷೇಕ ನಡೆಯಲಿದೆ. ಮುಂಜಾನೆಯಿಂದಲೇ ಈ ಅಪೂರ್ವ ಕಲಶಾಭಿಷೇಕ ಆರಂಭಗೊಳ್ಳಲಿದೆ.

    ನೂರು ಬಗೆಯ ಔಷಧೀಯ ಗಿಡಮೂಲಿಕೆಗಳ ದ್ರವ್ಯಗಳನ್ನು ಓಷಧಿ ಸೂಕ್ತದಿಂದ ಅಭಿಮಂತ್ರಿಸಿ, ಪವಮಾನ ಹೋಮ, ಧನ್ವಂತರಿ ಹೋಮ ಸಹಿತವಾಗಿ ಕಲಶಾಭಿಷೇಕ ನಡೆಯಲಿದೆ. ಪ್ರಸನ್ನ ಕಾಲದಲ್ಲಿ ಮಾತೆಯ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

    ಲೋಕ ಕಲ್ಯಾಣಾರ್ಥವಾಗಿ ನಡೆಯುವ ಈ ಅಪೂರ್ವ ಶತೌಷಧಿ ದ್ರವ್ಯ ಕಲಶಾಭಿಷೇಕದ ಫಲವಾಗಿ ಮಾತೆಯ ಪೂರ್ಣ ಅನುಗ್ರಹ ಲೋಕಕ್ಕಿ ಸಿಗಲಿ, ಜಗತ್ತು ಕೊರೋನಾ ಮುಕ್ತವಾಗಲಿ‌ ಎಂದು ಪ್ರಾರ್ಥಿಸಲಾಗವುದು.

    Share Information
    Advertisement
    Click to comment

    You must be logged in to post a comment Login

    Leave a Reply